ಪ್ರೀತಿಸಿದ ಯುವತಿ ಅಣ್ಣ ಎಂದಿದ್ದಕ್ಕೆ ಮನನೊಂದು ಕೋರ್ಟ್ ನಲ್ಲೇ ಕೈ ಕತ್ತರಿಸಿದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರೀತಿಸಿದ ಯುವತಿ ತನಗೆ ಕೈಕೊಟ್ಟು ಆಕೆಯ ಹೆತ್ತವರ ಜೊತೆ ಹೋಗಲು ಒಪ್ಪಿದ್ದರಿಂದ ಮನನೊಂದ 31 ವರ್ಷದ ವ್ಯಕ್ತಿ ಸೋಮವಾರ ಕೇರಳದ ಹೈಕೋರ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೋರ್ಟ್​ ನಲ್ಲಿ ಯುವತಿ ‘ತಾನು ತನ್ನ ಹೆತ್ತವರನ್ನು ಬಿಟ್ಟು ಬದುಕಲಾರೆ, ತಾನು ಯಾರನ್ನೂ ಪ್ರೀತಿ ಮಾಡಿಲ್ಲ, ಆತ ತನ್ನ ಅಣ್ಣನ ಸಮಾನ’ ಎಂದು ಹೇಳಿದ್ದು, ಇದರಿಂದ ಬೇಸರಗೊಂಡ ವ್ಯಕ್ತಿ ಕೋರ್ಟ್​ನಲ್ಲೇ ತನ್ನ ಕೈ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೇರಳದ ತ್ರಿಶೂರ್ ಜಿಲ್ಲೆಯ 31 ವರ್ಷದ ವಿಷ್ಣು ಎಂಬ ವ್ಯಕ್ತಿ 23 ವರ್ಷದ ಯುವತಿ ಸುಮಾರು 1 ತಿಂಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ತಮ್ಮ ಮಗಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಯುವತಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಅವರಿಬ್ಬರೂ ಸೋಮವಾರ ಹೈಕೋರ್ಟ್‌ಗೆ ಹಾಜರಾಗಿದ್ದರು.

ಈ ವೇಳೆ ಯುವತಿ ನಾನು ನನ್ನ ಕುಟುಂಬದೊಂದಿಗೆ ಹೋಗಲು ಬಯಸುತ್ತೇನೆ ಎಂದು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಸಿ. ಜಯಚಂದ್ರನ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಿದ್ದಳು. ನಾನು ವಿಷ್ಣುವಿನ ಜೊತೆ ಮದುವೆಯಾಗಲು ಸಾಧ್ಯವಿಲ್ಲ . ಒಂದು ವೇಳೆ ತನ್ನನ್ನು ಬಿಟ್ಟು ಹೋದರೆ ಕೊಲ್ಲುವುದಾಗಿ ವಿಷ್ಣು ಬೆದರಿಕೆ ಹಾಕಿದ್ದ. ಹೀಗಾಗಿ, ಇಷ್ಟು ದಿನ ಆತನೊಂದಿಗೆ ವಾಸವಾಗಿದ್ದೆ. ಆತ ನನ್ನ ಅಣ್ಣನಿದ್ದಂತೆ. ಆತನನ್ನು ಎಂದಿಗೂ ನಾನು ಪ್ರೀತಿ ಮಾಡಿಲ್ಲ ಎಂದು ಹೇಳಿದ್ದಳು.

ಆ ಯುವತಿ ಹೇಳಿಕೆಯ ಪ್ರಕಾರ, ವಿಷ್ಣು ಈಗಾಗಲೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಪತ್ನಿಯೊಂದಿಗಿನ ಸಂಬಂಧ ತೊರೆದು ಆ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಈ ವಿಚಾರಣೆಯ ನಂತರ ಆ ಯುವತಿ ತನ್ನ ಕುಟುಂಬದೊಂದಿಗೆ ಹೊರಟು ಹೋದಾಗ ಬೇಸರಗೊಂಡ ವಿಷ್ಣು ಜೇಬಿನಿಂದ ಚಾಕುವನ್ನು ತೆಗೆದುಕೊಂಡು ತನ್ನ ಕೈಯ ನರವನ್ನು ಕತ್ತರಿಸಿಕೊಂಡಿದ್ದಾನೆ. ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಆತನನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!