ಹೊಸದಿಗಂತ ವರದಿ, ಮೈಸೂರು :
ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ದೊಡ್ಡ ಕೆರೆಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ.
ಉದ್ಬೂರು ಗ್ರಾಮದ ನಿವಾಸಿ ಕೆಂಪಚೌಡ (೨೫) ಮೃತ ಯುವಕ .
ಬೆಳ್ಳಂ ಬೆಳಗ್ಗೆ ಕೆರೆಯಲ್ಲಿ ಯುವಕನ ಶವ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಜಯಪುರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಜಯಪುರ ಠಾಣೆಯ ಪೋಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆರೆ ಪಕ್ಕದಲ್ಲಿಯೇ ಇದ್ದ ಬಾರ್ ನಲ್ಲಿ ಕೆಂಪಚೌಡ ಮದ್ಯ ಸೇವಿಸಿ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.