ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಮ್ಯಾಜಿಕ್ ಮಾಡಿದ್ದ ಎಎಪಿ ಪಕ್ಷ ದಕ್ಷಿಣ ಭಾರತದಲ್ಲಿ ಸಪ್ಪೆಯಾಗಿದೆ. ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲು ಒಂದೇ ಒಂದು ಸ್ಥಾನದಲ್ಲೂ ಕೂಡ ಗೆಲುವು ಸಾಧಿಸಲಾಗದೆ ಮಕಾಡೆ ಮಲಗಿದೆ.
ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿ ಕರ್ನಾಟದಲ್ಲಿ ಎಂಟ್ರಿ ಕೊಡುವುದರಲ್ಲೇ ಮುಗ್ಗರಿಸಿದೆ. ಈ ಪಕ್ಷ ಕರ್ನಾಟಕದ ಶ್ರೀಸಾಮಾನ್ಯನನ್ನು ತಲುಪಲೇ ಇಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಕೂಡ ಒಂದೇ ಒಂದು ಕ್ಷೇತ್ರವನ್ನು ಆವರಿಸುವುದಕ್ಕೂ ಸಾಧುವಾಗಿಲ್ಲ.