CINE | ಬೀಗರೂಟಕ್ಕೆ ಜನರ ಕೊರತೆ, ಸಿಕ್ಕಾಪಟ್ಟೆ ಊಟ ವೇಸ್ಟ್ ಆಯ್ತು ಅಂತ ನೊಂದುಕೊಂಡ ಅಭಿಷೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಮಂಡ್ಯದ ತುಂಬೆಲ್ಲಾ ಬಾಡೂಟದ್ದೇ ಘಮಲು, 15 ಎಕರೆ ಜಾಗದಲ್ಲಿ ಅಂಬಿ ಪರಿವಾರ ಬೀಗರೂಟಕ್ಕೆ ವ್ಯವಸ್ಥೆ ಮಾಡಿತ್ತು.

ಅಭಿಷೇಕ್-ಅವಿವಾ ಮದುವೆಯ ನಂತರ ಬೀಗರೂಟಕ್ಕೆ 50ಸಾವಿರ ಜನರಿಗೆ ಆಹ್ವಾನ ನೀಡಲಾಗಿತ್ತು. ಜೊತೆಗೆ ಊರಿನವರಿಗೂ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಂದುಕೊಂಡಷ್ಟು ಜನ ಊಟಕ್ಕೆ ಬರಲೇ ಇಲ್ಲ.

ಇದರ ಜೊತೆಗೆ ಅಡುಗೆ ಮಾಡುವ ಸ್ಥಳಕ್ಕೆ ಕೆಲವರು ಬಂದು ದಾಂಧಲೆ ಮಾಡಿದ್ದು, ಊಟವನ್ನು ಚೆಲ್ಲಿದ್ದಾರೆ. ಈ ಬಗ್ಗೆ ಅಭಿಷೇಕ್ ಮಾತನಾಡಿದ್ದು, ದುಡ್ಡು ವೇಸ್ಟ್ ಆಯ್ತು ಅನ್ನೋಕ್ಕಿಂತ ಅನ್ನ ಯಾರ ಹೊಟ್ಟೆಗೂ ಸೇರದೇ ವೇಸ್ಟ್ ಆಗಿದ್ದಕ್ಕೆ ಮನಸ್ಸಿಗೆ ನೋವಾಗಿದೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕೆಲವರ ದಾಂಧಲೆಯಿಂದ ಸಾಕಷ್ಟು ಊಟ ವೇಸ್ಟ್ ಆಗಿ ಹೋಯ್ತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!