Monday, November 10, 2025

ಛತ್ತೀಸ್‌ಗಢದ ಅಬುಜ್‌ಮರ್, ಉತ್ತರ ಬಸ್ತಾರ್‌ ನಕ್ಸಲ್ ಮುಕ್ತ ಪ್ರದೇಶ: ಅಮಿತ್ ಶಾ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದಲ್ಲಿ ಇಂದು ಒಂದೇ ದಿನ 170 ಮಂದಿ ನಕ್ಸಲರು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ. ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಇದನ್ನು ಮಹತ್ವದ ದಿನ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಇಂದು ಛತ್ತೀಸ್‌ಗಢದಲ್ಲಿ 170 ನಕ್ಸಲರು ಶರಣಾಗಿದ್ದಾರೆ. ನಿನ್ನೆ ರಾಜ್ಯದಲ್ಲಿ 27 ಜನರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ಮಹಾರಾಷ್ಟ್ರದಲ್ಲಿ ನಿನ್ನೆ 61 ಜನರು ಮುಖ್ಯವಾಹಿನಿಗೆ ಮರಳಿದರು. ಒಟ್ಟಾರೆಯಾಗಿ, ಕಳೆದ 2 ದಿನಗಳಲ್ಲಿ 258 ಎಡಪಂಥೀಯ ಉಗ್ರಗಾಮಿಗಳು ಹಿಂಸಾಚಾರವನ್ನು ತ್ಯಜಿಸಿದ್ದಾರೆ” ಎಂದು ಹೇಳಿದ್ದಾರೆ.

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 10 ಮಹಿಳೆಯರು ಸೇರಿದಂತೆ 27 ಮಾವೋವಾದಿಗಳು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ. ಈ ಗುಂಪಿನಲ್ಲಿ ದಂಗೆಕೋರ ಜಾಲದ ಅತ್ಯಂತ ಅಪಾಯಕಾರಿ ಘಟಕಗಳಲ್ಲಿ ಒಂದಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ -1ರ ಇಬ್ಬರು ಹಾರ್ಡ್‌ಕೋರ್ ಕಾರ್ಯಕರ್ತರು ಸೇರಿದ್ದಾರೆ.

ಈ ವೇಳೆ ಶರಣಾಗುತ್ತಿರುವ ಮಾವೋವಾದಿಗಳನ್ನು ಸ್ವಾಗತಿಸಿದ ಅಮಿತ್ ಶಾ, ಹಿಂಸಾಚಾರವನ್ನು ತ್ಯಜಿಸುವ ಮತ್ತು ಭಾರತದ ಸಂವಿಧಾನದಲ್ಲಿ ನಂಬಿಕೆ ಇಡುವ ಅವರ ನಿರ್ಧಾರವನ್ನು ಶ್ಲಾಘಿಸಿದರು. ಭಾರತದ ಸಂವಿಧಾನದ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸಿ, ಹಿಂಸಾಚಾರವನ್ನು ತ್ಯಜಿಸುವ ಅವರ ನಿರ್ಧಾರವನ್ನು ನಾನು ಶ್ಲಾಘಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಪಿಡುಗನ್ನು ಕೊನೆಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.

ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತರ್ ಅನ್ನು ಇಂದು ನಕ್ಸಲ್ ಭಯೋತ್ಪಾದನೆಯಿಂದ ಮುಕ್ತಗೊಳಿಸಲಾಗಿದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.

https://x.com/AmitShah/status/1978769545394569545?ref_src=twsrc%5Etfw%7Ctwcamp%5Etweetembed%7Ctwterm%5E1978769545394569545%7Ctwgr%5E0a6a99bb87adc735d63b533a8ae87615f21a21a6%7Ctwcon%5Es1_&ref_url=https%3A%2F%2Ftv9kannada.com%2Fnational%2Famit-shah-declares-chhattisgarhs-abujhmarh-and-north-bastar-naxal-free-after-170-naxals-surrender-1095359.html

‘ಒಂದು ಕಾಲದಲ್ಲಿ ಭಯೋತ್ಪಾದಕ ನೆಲೆಗಳಾಗಿದ್ದ ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತರ್ ಅನ್ನು ಇಂದು ನಕ್ಸಲ್ ಭಯೋತ್ಪಾದನೆಯಿಂದ ಮುಕ್ತಗೊಳಿಸಲಾಗಿದೆ ಎಂಬುದು ಸಂತೋಷದ ವಿಷಯ’ ಎಂದು ಅವರು ಹೇಳಿದ್ದಾರೆ.

2024ರಿಂದ ಇಲ್ಲಿವರೆಗೆ 2,100 ನಕ್ಸಲರ ಶರಣಾಗತಿ: ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಅಂದರೆ 2024ರ ಜನವರಿಯಿಂದ ಈವರೆಗೆ 2,100 ನಕ್ಸಲರು ಶರಣಾಗಿದ್ದಾರೆ. 1,785 ಜನರನ್ನು ಬಂಧಿಸಲಾಗಿದೆ. ಸುಮಾರು 477 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಶಾ ಮಾಹಿತಿ ನೀಡಿದ್ದಾರೆ.

error: Content is protected !!