ಹೊಸದಿಗಂತ ಉಪ್ಪಿನಂಗಡಿ:
ವಿವಾಹಪೂರ್ವ ಶೂಟಿಂಗ್ ನಡೆಸಲೆಂದು ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ತಂಡವಿದ್ದ ಕಾರೊಂದು ಕೋಣಾಲು ಗ್ರಾಮದ ಕರ್ಬ ಸಂಕ ಎಂಬಲ್ಲಿ ಅಪಘಾತಕ್ಕೀಡಾಗಿ ಭಾವೀ ವಧುವರರ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ನೆಲಮಂಗಲದ ನಿವಾಸಿಗರಾದ ವಿವಾಹ ನಿಶ್ಚಿತಾರ್ಥವಾಗಿದ್ದ ಭಾವಿ ವರ ಲೋಕೇಶ್ ಹಾಗೂ ಭಾವಿ ವಧು ಉಷಾ, ಮತ್ತ್ತಾಕೆಯ ಬ್ಯೂಟೀಷಿಯನ್ ಪದ್ಮ ಹಾಗೂ ಕಾರು ಚಾಲಕ ಪುರುಷೋತ್ತಮ ರವರಿದ್ದ ತಂಡ ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣಿಸಿ ಮೇಲುಕೋಟೆಯಲ್ಲಿ ಶ್ಯೂಟಿಂಗ್ ಮುಗಿಸಿ ಉಡುಪಿಯತ್ತ ಪ್ರಯಾಣಿಸುತ್ತಿದ್ದಾಗ ದಾರಿ ಮದ್ಯದ ಕಡಬ ತಾಲೂಕು ಕೋಣಾಲು ಗ್ರಾಮದ ಕರ್ಬ ಸಂಕ ಎಂಬಲ್ಲಿ ರಾತ್ರಿ ವೇಳೆ ಅಪಘಾತಕ್ಕೀಡಾಗಿತ್ತು.
ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೂ ಗಂಭೀರ ಸ್ವರೂಪದ ಗಾಯಗಳಾಗಿದೆ. ಈ ತಂಡದ ಶ್ಯೂಟಿಂಗ್ ಸಿಬ್ಬಂದಿಗಳು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಭಾವಿ ಮದುಮಕ್ಕಳ ಕಾರು ಅಪಘಾತಕ್ಕೀಡಾಗಿರುವುದನ್ನು ಕಂಡು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅಪಘಾತದಿಂದ ಭಾವಿ ಮದುಮಕ್ಕಳ ಕಾಲಿಗೆ ಗಂಭ್ಹೀರ ಸ್ವರೂಪದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.