ಜೈಲಿನಿಂದಲೇ ನಿರ್ಮಾಪಕ, ನಿರ್ದೇಶಕರಿಗೆ ಕರೆ ಮಾಡಿದ ನಟ ದರ್ಶನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪರಪ್ಪನ ಅಗ್ರಹಾರ ಜೈಲಿನಿಂದಲೇ ನಟ ದರ್ಶನ್ ನಿರ್ಮಾಪಕರಿಗೆ, ನಿರ್ದೇಶಕರಿಗೆ ಕರೆ ಮಾಡುತ್ತಿದ್ದು, ಜಾಮೀನಿನ ಮೇಲೆ ಹೊರತರುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರದ ಬೂತ್ ಫೋನ್ ನಿಂದ ನಟ ದರ್ಶನ್ ಕರೆ ಮಾಡಿ ಜಾಮೀನಿನ ಮೇಲೆ ಹೊರತರುವಂತೆ ನಿರ್ಮಾಪಕ, ನಿರ್ದೇಶಕರಿಗೆ ಹೇಳುತ್ತಿದ್ದಾರೆ ಎನ್ನಲಾಗಿದೆ.

ಅಲ್ಲದೇ ಅಕ್ಕಪಕ್ಕದ ಕೈದಿಗಳ ಲಿಮಿಟ್ ಕೂಡ ಬಳಕೆ ಮಾಡಿಕೊಳ್ಳುತ್ತಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ್ಲೇ ನಿರ್ಮಾಪಕರಿಗೆ ಫೋನ್ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ, ಜೊತೆಗೆ ಸ್ಥಗಿತಗೊಂಡ ಕೆಲವು ಸಿನಿಮಾಗಳ ಬಗ್ಗೆ ಕೂಡ ನಿರ್ದೇಶಕರು, ನಿರ್ಮಾಪಕ ಜೊತೆ ಮಾತುಕತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ವಾರಕ್ಕೆ 3 ಬಾರಿ ಫೋನ್ ಕರೆ ಮಾಡಲು ದರ್ಶನ್ ಗೆ ಜೈಲಿನ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಇದುವರೆಗೆ ಕುಟುಂಬದವರ ಜೊತೆ ಒಂದು ಬಾರಿಯೂ ಕರೆ ಮಾಡಿ ಮಾತನಾಡದ ನಟ ದರ್ಶನ್ ರಾತ್ರಿಯಾಗುತ್ತಿದ್ದಂತೆ ಕೆಲವು ನಿರ್ಮಾಪಕ-ನಿರ್ದೇಶಕರಿಗೆ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!