ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡಿನ ಅತ್ಯಂತ ಜನಪ್ರಿಯ, ಕಾರಣಿಕ ಕ್ಷೇತ್ರ ಮಧೂರಿನಲ್ಲ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ . ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಈ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮತ್ತು ಮೂಡಪ್ಪ ಸೇವೆ ಅದ್ಧೂರಿಯಾಗಿ ನಡೆಯುತ್ತಿದೆ.
ಈ ಸಂಭ್ರಮ ನಡುವೆ ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಮೂಡಪ್ಪ ಸೇವೆ ಮಾಡಿಸಿದ್ದಾರೆ. 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಿಸಿದ್ದು, ಆದರೆ ಕಾರಣಾಂತರಗಳಿಂದ ನಟಿ ಇದರಲ್ಲಿ ಭಾಗಿಯಾಗಿಲ್ಲ. ಕ್ಷೇತ್ರದಕ್ಕೆ ಬರಲು ಆಗದ ಕಾರಣ ತನ್ನ ಹೆಸರಿನಲ್ಲಿ ಸೇವೆ ಮಾಡಿಸಿದ್ದಾರೆ.
ಕೇರಳದ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಮಧೂರು ಗಣಪತಿ ಕ್ಷೇತ್ರವೂ ಒಂದಾಗಿದ್ದು, ಗಜಪೃಷ್ಠಾಕೃತಿಯ ಈ ದೇವಸ್ಥಾನವನ್ನು ಪುರಾತನ ಶೈಲಿ ಉಳಿದುಕೊಂಡು ಯಾವುದೇ ಧಕ್ಕೆ ಬರದಂತೆ ನವೀಕರಣ ಮಾಡಲಾಗಿದೆ. ಪ್ರಧಾನ ಗರ್ಭಗುಡಿಯಲ್ಲಿ ಮಹಾಶಿವನಿಗೆ ಆರಾಧನೆ ನಡೆದರೆ, ಬಲಭಾಗದಲ್ಲಿ ಮಹಾಗಣಪತಿಗೆ ಆರಾಧನೆ ನಡೆಯುತ್ತದೆ.