ಬಂಡಾಯ ಬೆನ್ನಲ್ಲೇ ಮುಂಬೈನಲ್ಲಿ ಎನ್‌ಸಿಪಿ ಪಕ್ಷದ ನೂತನ ಕಚೇರಿ ತೆರೆದ ಅಜಿತ್ ಪವಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಸೇರ್ಪಡೆಯಾದ ಕೆಲವೇ ದಿನಗಳ ನಂತರ, ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಂಗಳವಾರ ಮುಂಬೈನ ಮಂತ್ರಾಲಯದ ಬಳಿ ಹೊಸ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಪಕ್ಷದ ಕಚೇರಿ ತೆರೆದಿದ್ದಾರೆ. ಶರದ್‌ ಪವಾರ್‌ ಗುಂಪಿನಿಂದ ಬೇರ್ಪಟ್ಟ ಬಳಿಕ ಎನ್‌ಸಿಪಿ ಪಕ್ಷ ನಮ್ಮದು ಎಂದ ಅಜಿತ್‌ ಪವಾರ್‌ ಇಂದು ಅಧಿಕೃತವಾಗಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ನಿನ್ನೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಜಂಟಿ ಸಮಾವೇಶದಲ್ಲಿ ಲೋಕಸಭೆ ಸಂಸದ ಸುನೀಲ್ ತಟ್ಕರೆ ಅವರನ್ನು ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಘೋಷಿಸಿದರು.

“ನಾವು ಜಯಂತ್ ಪಾಟೀಲ್ ಅವರನ್ನು ಅವರ ಜವಾಬ್ದಾರಿಗಳಿಂದ ಮುಕ್ತಗೊಳಿಸುತ್ತಿದ್ದೇವೆ ಮತ್ತು ಅವರ ಸ್ಥಾನದಲ್ಲಿ ಸುನೀಲ್ ತಟ್ಕರೆ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದೇನೆ. ಸುನೀಲ್ ತಟ್ಕರೆ ಅವರು ಸಂಘಟನಾ ಬದಲಾವಣೆಗಳನ್ನು ಮಾಡುವ ಅಧಿಕಾರವನ್ನು ಹೊಂದಿದ್ದಾರೆ” ಎಂದು ಜಂಟಿ ಸಮಾವೇಶದಲ್ಲಿ ಎನ್‌ಸಿಪಿ ನಾಯಕ ಪಟೇಲ್ ಘೋಷಿಸಿದರು.

ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಮ್ಮ ನಿರ್ಧಾರವನ್ನು ನಾವು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ತಿಳಿಸಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!