ಹೊಸದಿಗಂತ ಡಿಜಿಟಲ್ ಡೆಸ್ಕ್:
41 ಕಾರ್ಮಿಕರು..17 ದಿನಗಳ ಸಾವು-ಬದುಕಿನ ಮಧ್ಯೆ ನಡೆಸಿದ ಹೋರಾಟ ಕೊನೆಗೂ ಸುಖಾಂತ್ಯಗೊಂಡಿದ್ದು, ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಉತ್ತರಕಾಶಿ ಸಿಲ್ಕ್ಯಾರ ಸುರಂಗ ಕಾರ್ಯಾಚರಣೆಯ ಯಶಸ್ವಿನ ರೋಚಕ ಕ್ಷಣಗಳ ಬಗ್ಗೆ ಆನಂದ್ ಮಹೀಂದ್ರಾ ಕೂಡ ಸಂತಸ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡಿದ್ದಾರೆ.
ಉತ್ತರಾಖಂಡದ ಉತ್ತರಕಾಶಿ ಸುರಂಗ ಕಾರ್ಯಾಚರಣೆ ಹಲವು ಅಡೆತಡೆಗಳನ್ನು ಮೀರಿ ಎಲ್ಲಾ ಸಂತ್ರಸ್ತರನ್ನು ಹೊರ ಕರೆತರಲಾಗಿದೆ. ʻಯಾವುದೇ ಸುರಂಗದಿಂದ ಹೊರಬರುವುದು ಕಷ್ಟವಲ್ಲ, ಎಂಬುದು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ. ಇವರೆಲ್ಲರೂ ಪ್ರತಿಯೊಬ್ಬ ಭಾರತೀಯ ಪ್ರಜೆಯ ಆತ್ಮವಿಶ್ವಾಸವನ್ನು ಹೆಚ್ಚು ಮಾಡಿದರು ಎಂಬುದನ್ನು ಎಲ್ಲರಿಗೂ ನೆನಪಿಸಿದರು. 41 ಅಮೂಲ್ಯ ಜೀವಗಳನ್ನು ಉಳಿಸಲು ಕಳೆದ 17 ದಿನಗಳಿಂದ ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ಯಾವುದೇ ಕ್ರೀಡಾ ಗೆಲುವಿಗಿಂತ ಹೆಚ್ಚಾಗಿ, ನೀವು ದೇಶದ ಉತ್ಸಾಹವನ್ನು ಹೆಚ್ಚಿಸಿದ್ದೀರಿ ಮತ್ತು ನಮ್ಮ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದೀರಿ ಎಂದು ಹೊಗಳಿದರು. ನಾವು ಒಗ್ಗಟ್ಟಿನಿಂದ ಇದ್ದರೆ, ಯಾವುದೇ ಸುರಂಗದಿಂದ ಹೊರಬರಲು ಕಷ್ಟವಾಗುವುದಿಲ್ಲ, ಯಾವ ಕಾರ್ಯವೂ ಅಸಾಧ್ಯವಲ್ಲʼ ಎಂಬ ಆತ್ಮವಿಶ್ವಾಸವನ್ನು ತುಂಬಿದರು.
It’s time for gratitude. Thank you to EVERY single person who worked tirelessly over the past 17 days to save these 41 precious lives. More than any sporting victory could have, you have uplifted the spirits of a country & united us in our hope. You’ve reminded us that no tunnel… https://t.co/ZSTRZAAJOl
— anand mahindra (@anandmahindra) November 28, 2023
ಸುರಂಗದಿಂದ ಹೊರಬಂದವರನ್ನು ತಕ್ಷಣ ತುರ್ತು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ದೇಶದ ಜನರು ಧನ್ಯವಾದ ಅರ್ಪಿಸಿದ್ದಾರೆ. ಮತ್ತೊಂದೆಡೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ನಿರಂತರವಾಗಿ ಮೇಲ್ವಿಚಾರಣೆ ಮಾಡಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಸುರಂಗದಿಂದ ಹೊರಬಂದ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದರು.