ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಕಿಮೂಟೆ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಎಸ್ ವಿಎಸ್ ಕಾಲೇಜ್ ಸಮೀಪ ಚಾಲಕನ ನಿಯಂತ್ರಣತಪ್ಪಿ ಪಲ್ಟಿಯಾಗಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ
ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸ್ತಾ (32) ಮೃತಪಟ್ಟ ಕಾರ್ಮಿಕನಾಗಿದ್ದಾನೆ. ಲಾರಿ
ಚಾಲಕ ಸುಜಿತ್ ಕ್ಲೀನರ್ ಸಿ.ಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.
ಅಕ್ಕಿ ಲೋಡ್ ಲಾರಿ ಬಂಟ್ವಾಳದ ಎಸ್ವಿ.ಎಸ್.ಕಾಲೇಜು ಬಳಿ ಬರುವಾಗ ಅತಿಯಾದ ಮಳೆಗೆ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾಗಿದೆ.
ಹೆಬ್ರಿಯಿಂದ ಅಕ್ಕಿ ಮೂಟೆಹೇರಿಕೊಂಡು ಮೂಡಬಿದ್ರೆಯಾಗಿ ಬಂಟ್ವಾಳದತ್ತ ಬರುತ್ತಿದ್ದಾಗ ವಿಪರೀತ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಪರಿಣಾಮ ಲಾರಿಯ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಕಾರ್ಮಿಕ ರಸ್ತೆಗೆ ಎಸೆಯಲ್ಟಟ್ಟು ಮೃತಪಟ್ಟಿದ್ದಾನೆನ್ನಲಾಗಿದೆ.ಇವರ ಜೊತೆಗಿದ್ದ ಇನ್ನೋರ್ವ ಕಾರ್ಮಿಕ ಆದರ್ಶ ಎಂಬವರು ಗಾಯಗೊಂಡೊದ್ದು,ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾರಿಯ ನಾಲ್ಕು ಚಕ್ರಗಳು ಮೇಲ್ಮುಖವಾಗಿ ಬಿದ್ದಿದ್ದು,ಹಿಂಬದಿಯಲ್ಲಿದ್ದ ಕಾರ್ಮಿಕರಿಬ್ಬರು ಲಾರಿಯಡಿಯಲ್ಲಿಸಿಲುಕಿದ್ದರು.ಇವರಿಬ್ಬರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.ಈ ಸಂದರ್ಭ ಒರ್ವಾತ ಮೃತಪಟ್ಟಿದ್ದರೆ,ಇನ್ನೋರ್ವ ಗಾಯಗೊಂಡಿದ್ದರು.ಚಾಲಕ ಮತ್ತು ಕ್ಲೀನರ್ ಅಪಾಯವಿಲ್ಲದೆ ಪಾರಾಗಿದ್ದಾರೆ.