ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಬದಲಾವಣೆ ವಿಚಾರ ಮುನ್ನೆಲೆಯಲ್ಲಿರುವ ಹೊತ್ತಿನಲ್ಲೇ ಕಾಂಗ್ರೆಸ್ನಲ್ಲಿ ರಾಜಕೀಯ ವಿದ್ಯಮಾನಗಳು ಜೋರಾಗಿ ನಡೆಯುತ್ತಿವೆ. ಮೂವರು ಸಚಿವರು ಡಿನ್ನರ್ ಸಭೆ ನಡೆಸಿದ ಬೆನ್ನಲ್ಲೇ ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ.
ಸಿಎಂ ಜೊತೆ ಮಾತನಾಡಿದ ಡಿಸಿಎಂ ಚರ್ಚೆಯ ರಹಸ್ಯವನ್ನು ಬಹಿರಂಗಪಡಿಸಿಲ್ಲ. ನಾನು ಸಿಎಂ ಭೇಟಿ ಮಾಡದೇ ಇನ್ಯಾರು ಭೇಟಿ ಮಾಡ್ತಾರೆ? ಬೇರೆ ಪಾರ್ಟಿ ಅವರನ್ನ ಭೇಟಿ ಮಾಡ್ತಿದ್ದೇವಾ? ಅವರು ನಮ್ಮ ಲೀಡರ್ ನಮ್ಮ ಸಿಎಂ,ಅನೇಕ ವಿಚಾರ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಡಿನ್ನರ್ಗೆ ಕರೆದಿದ್ದಾರೆ ಆ ಬಗ್ಗೆ ಮಾತಾಡಿದ್ದೇವೆ ಅಂತ ತಿಳಿಸಿದ್ದಾರೆ.