ಪ್ರಧಾನಿ ಮೋದಿ ಭೇಟಿಯಾದ ಅರ್ಜುನ್ ಸರ್ಜಾ: ಹನುಮಾನ್ ಮಂದಿರಕ್ಕೆ ಬನ್ನಿ ಎಂದ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಹಲವು ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯ ಭೇಟಿಯಾಗಿರುವ ನಟ ಅರ್ಜುನ್ ಸರ್ಜಾ ಹಾಗೂ ಪುತ್ರಿ ಐಶ್ವರ್ಯ ಸರ್ಜಾ, ವಿಶೇಷ ಮನವಿ ಮಾಡಿದ್ದಾರೆ.

ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಮೋದಿ, ರಾಮಾಯಣ ಸಂಬಂಧಿಸಿದ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ತಮಿಳುನಾಡಿನಲ್ಲಿ ಖ್ಯಾತ ನಟ ಅರ್ಜುನ್ ಸರ್ಜಾ ಹಾಗೂ ಪುತ್ರಿ ಐಶ್ವರ್ಯ ಸರ್ಜಾ, ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

ಪ್ರಧಾನಿ ಮೋದಿ ಬೇಟಿಯಾದ ಅರ್ಜುನ್ ಸರ್ಜಾ ಕುಟುಂಬ, ಕೆಲ ಹೊತ್ತು ಮಾತುಕತೆ ನಡೆಸಿದೆ. ಇದೇ ವೇಳೆ ಅರ್ಜುನ್ ಸರ್ಜಾ ನಿರ್ಮಿಸಿರುವ ಹನುಮಾನ್ ಮಂದಿರದ ಫೋಟೋ ಫ್ರೇಮ್‌ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಹನುಮಾನ್ ಮಂದಿರ ಫೋಟೋ ಫ್ರೇಮ್‌ನ್ನು ಮೋದಿಗೆ ನೀಡಿದ ಅರ್ಜುನ್ ಸರ್ಜಾ, ಮಂದಿರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಮೋದಿ ಕೂಡ ಸ್ಪಂದಿಸಿದ್ದಾರೆ.

ಅರ್ಜುನ್ ಸರ್ಜಾ ತಮಿಳುನಾಡಿನ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಈ ಹನುಮಾನ್ ದೇಗುಲಕ್ಕೆ ಶೀಘ್ರದಲ್ಲೇ ಭೇಟಿ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.

ನಾನು ಹಾಗೂ ನನ್ನ ಕುಟುಂಬ ಅತೀ ಹೆಚ್ಚು ಇಷ್ಟಪಡುವ, ಗೌರವಿಸುವ ವ್ಯಕ್ತಿ ಪ್ರಧಾನಿ ಮೋದಿ. ವಿಶ್ವದ ಪವರ್‌ಫುಲ್ ನಾಯಕ ಮೋದಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದೆ ಸೌಭಾಗ್ಯ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

ಮೋದಿ ಭೇಟಿಯಾದ ಬೆನ್ನಲ್ಲೇ ಅರ್ಜುನ್ ಸರ್ಜಾ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸರ್ಜಾ, ರಾಜಕೀಯ ಪ್ರವೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹನುಮಾನ್ ಮಂದಿರಕ್ಕೆ ಮೋದಿಯನ್ನು ಆಹ್ವಾನಿಸಲು ಭೇಟಿಯಾಗಿದೆ. ಕೆಲ ಹೊತ್ತು ಆತ್ಮೀಯವಾಗಿ ಮಾತನಾಡಿದ್ದಾರೆ. ಇದರಲ್ಲಿ ರಾಜಕೀಯ ಇರಲಿಲ್ಲ. ಅವರ ಮಾತು, ನಡೆ, ವ್ಯಕ್ತಿತ್ವವೇ ಪ್ರಕಾಶಮಾನವಾದದ್ದು ಎಂದು ಸರ್ಜಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!