ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದಲ್ಲಿ ಹಿಟ್ ಆಂಡ್ ರನ್ಗೆ ಎಎಸ್ಐ ಬಲಿಯಾಗಿದ್ದಾರೆ,ಅಪಘಾತದ ತೀವ್ರತೆಗೆ ತಲೆ ನಜ್ಜುಗುಜ್ಜಾಗಿದೆ.
ಕೊಪ್ಪಳ ತಾಲೂಕಿನ ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಹೈವೇ ಪೆಟ್ರೋಲಿಂಗ್ ಬಂದೋ ಬಸ್ತ್ನಲ್ಲಿ ಇರುವಾಗ ಅಪರಿಚಿತ ವಾಹನವೊಂದು ಗುದ್ದಿಕೊಂಡು ಹೋಗಿದೆ.
ಮುನಿರಾಬಾದ್ ಪೊಲೀಸ್ ಠಾಣೆಯ ಎಎಸ್ಐ ರಾಮಣ್ಣ (54) ಸಾವನ್ನಪ್ಪಿದವರು. ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಎಸ್ಐ ಹೈವೇನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಅಧಿಕಾರಿಗೆ ಗುದ್ದಿಕೊಂಡು ಹೋಗಿದೆ. ಹೀಗಾಗಿ ಸ್ಥಳದಲ್ಲೇ ಅಧಿಕಾರಿ ಮೃತಪಟ್ಟಿದ್ದಾರೆ. ವಾಹನ ಗುದ್ದಿದ ರಭಸಕ್ಕೆ ಅಧಿಕಾರಿಯ ತಲೆ ನಜ್ಜುಗುಜ್ಜಾಗಿದ್ದು ಗುರುತು ಸಿಗಂತೆ ಆಗಿದೆ.
ಇಂದು ಬೆಳಗ್ಗೆ ಸರಿ ಸುಮಾರು 3:00 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಾಮ್.ಎಲ್ ಅರೆಸಿದ್ದಿ ಹಾಗೂ ಸಿಪಿಐ ಸುರೇಶ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತುಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.