ಅಸ್ಸಾಂ ಸರ್ಕಾರದಿಂದ ಶುರುವಾಗಲಿದೆ ‘ಶ್ರದ್ಧಾಂಜಲಿ’ ಯೋಜನೆ: ಇದರ ಉದ್ದೇಶ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಸ್ಸಾಂ ಸರ್ಕಾರವು ವಿಶೇಷ ಯೋಜನೆಯೊಂದನ್ನು ಶುರು ಮಾಡಿದ್ದು , ಅದಕ್ಕೆ ‘ಶ್ರದ್ಧಾಂಜಲಿ’ ಎಂದು ಹೆಸರಿಡಲಾಗಿದೆ.

ಈ ಯೋಜನೆಯು ಕಡಿಮೆ ಸಂಬಳಕ್ಕೆ ರಾಜ್ಯದ ಹೊರಗೆ ದುಡಿಯುತ್ತಿರುವ ಕಾರ್ಮಿಕ, ಅಕಾಲಿಕವಾಗಿ ಮರಣಹೊಂದಿದರೆ ಅವರ ಶವವನ್ನು ಉಚಿತವಾಗಿ ಅವರ ಮನೆಗೆ ಕಳುಹಿಸುವ ಯೋಜನೆಯಾಗಿದೆ.

ಆದ್ರೆ ರಾಜ್ಯದ ಹೊರಗೆ ಚಿಕಿತ್ಸೆ ಪಡೆಯುತ್ತಿರುವವರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದರೆ ಈ ಯೋಜನೆಯು ಅವರಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಚಾನಕ್ಕಾಗಿ ಸಾವು ಸಂಭವಿಸಿದರೆ ಮಾತ್ರ ವಿಮೆ ಅನ್ವಯವಾಗುತ್ತದೆ.

ಇದಕ್ಕಾಗಿ ಅಸ್ಸಾಂ ಪೊಲೀಸರ ವಿಶೇಷ ತಂಡವು ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲಿದ್ದು, ಡಿಐಜಿ ಮಟ್ಟದ ಪೊಲೀಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಸಾವನ್ನಪ್ಪಿದವರ ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡುವ ಮೂಲಕ ಘಟನೆ ಬಗ್ಗೆ ಮಾಹಿತಿ ನೀಡಬಹುದು. ಈ ಕಾರಣಕ್ಕಾಗಿಯೇ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಖಾತೆಯನ್ನು ತೆರೆಯಲಾಗಿದೆ ಎಂದು ಸಚಿವ ಸಂಪುಟ ಹೇಳಿದೆ. ಅಕ್ಟೋಬರ್​​ನಿಂದ ಈ ಯೋಜನೆ ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದು, ನಮ್ಮ ಸಾವಿರಾರು ಯುವಕರು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಇತರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಕನಿಷ್ಠ ಆದಾಯ ಅವರಿಗಿರುತ್ತದೆ. ಅಚಾನಕ್ಕಾಗಿ ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ನಡೆಸುವುದು ಅವರ ಕುಟುಂಬ ಸದಸ್ಯರಿಗೆ ಹೊರೆಯಾಗುತ್ತದೆ.

ಶ್ರದ್ಧಾಂಜಲಿ ಯೋಜನೆಯು ಈ ಕುಟುಂಬಗಳಿಗೆ ಸಹಾಯ ಮಾಡಲಿದೆ. ಯಾವ ರಾಜ್ಯದಲ್ಲಿ ಅವರು ಮೃತಪಟ್ಟಿದ್ದರೂ ಕೂಡ ಸರ್ಕಾರವು ತಮ್ಮ ದುಡ್ಡಿನಲ್ಲಿಯೇ ಅವರ ಮನೆವರೆಗೆ ಶವವನ್ನು ಕರೆತರಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಧಿಕೃತ ಯೋಜನೆಗೂ ಮುನ್ನವೇ ಅಸ್ಸಾಂ ಸರ್ಕಾರವು ಶ್ರದ್ಧಾಂಜಲಿ ಮಾರ್ಗದರ್ಶಿ ಚೌಕಟ್ಟಿನಲ್ಲಿ ಸುಮಾರು 15 ಮೃತದೇಹಗಳನ್ನು ಹಿಂದಿರುಗಿಸಲು ಅನುಕೂಲ ಮಾಡಿಕೊಟ್ಟಿತ್ತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!