ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾನೆ ಸಂದರ್ಭ ದೇಶಕ್ಕೆ ದೇಶವೇ ರಾಮ ಜ್ಯೋತಿ ಬೆಳಗಿಸಿ ದೀಪಾವಳಿ ಮಾದರಿಯಲ್ಲಿ ಸಂಭ್ರಮಿಸುವ ಮೂಲಕ ಪುಣ್ಯ ಕ್ಷಣಗಳಿಗೆ ಮೆರುಗನ್ನು ನೀಡಿದ್ದಾರೆ. ಈ ಮೂಲಕ ಎಲ್ಲರ ಭಾವನೆಯೂ, ಎಲ್ಲರ ಭಕ್ತಿಯೂ ಒಂದೇ, ಎಲ್ಲರ ಮಾತಿನಲ್ಲೂ ಹಾಗೂ ಹೃದಯದಲ್ಲೂ ರಾಮನಿದ್ದಾನೆ ಎಂದು ಸಾಬೀತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ವರ್ಷದ ಮೊದಲ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮನ ಆಡಳಿತವು ಸಂವಿಧಾನ ರಚನಾಕಾರರಿಗೆ ಸ್ಫೂರ್ತಿಯ ಮೂಲ. ಇದೇ ಕಾರಣಕ್ಕಾಗಿ ನಾನು ಅಂದು ಅಯೋಧ್ಯೆಯಲ್ಲಿ ದೇವರಿಂದ ದೇಶ ಮತ್ತು ರಾಮನಿಂದ ರಾಷ್ಟ್ರದ ಬಗ್ಗೆ ಮಾತನಾಡಿದ್ದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ತಿಳಿಸಿದರು.
ಅಯೋಧ್ಯೆಯ ರಾಮಮಂದಿರಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಳ್ಳುವ ಮುಖಾಂತರ ಕೋಟ್ಯಾಂತರ ಜನರನ್ನು ಒಗ್ಗೂಡಿಸಿದೆ. ಇದರೊಂದಿಗೆ ದೇಶದ ಸಾಮೂಹಿಕ ಶಕ್ತಿಯನ್ನು ತೋರ್ಪಡಿಸಿದೆ ಎಂದ ಅವರು, ರಾಮಮಂದಿರದ ಉದ್ಘಾಟನೆ ದಿನದಂದು ರಾಮ ಭಜನೆಗಳನ್ನು ಹಾಡಿರುವುದು ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ