ಬಂಟ್ವಾಳದ ಕೊಲೆ ಪ್ರಕರಣ: ಶಂಕಿತ ಮೂವರು ಪೊಲೀಸ್ ವಶಕ್ಕೆ?

ಹೊಸದಿಗಂತ ವರದಿ,ಬಂಟ್ವಾಳ:

ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ರಹೀಂ ಹತ್ಯೆ ಹಾಗೂ ಶಾಫಿ ಎಂಬವರ ಮೇಲಿನ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿ ವಿಶೇಷ ಪೊಲೀಸ್ ತಂಡ ಮೂವರನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ತನಿಖೆಯ ದೃಷ್ಠಿಯಿಂದ ಇದನ್ನು ಖಚಿತಪಡಿಸಿಲ್ಲ .

ಮಂಗಳವಾರ ಪಿಕಪ್ ನಿಂದ ಮರಳು ಅನ್ ಲೋಡ್ ಮಾಡುತ್ತಿದ್ದಂತೆ ಬೈಕ್ ನಲ್ಲಿ ಬಂದ ಇಬ್ಬರು ಪಿಕಪ್ ನಲ್ಲಿದ್ದ ರಹೀಂನ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದರು.ಇದೇ ವೇಳೆ ತಡೆಯಲು ಬಂದ ಮತ್ತು ಶಾಫಿ ಮೇಲೂ ಹಲ್ಲೆ ನಡೆಸಲಾಗಿತ್ತು.ರಹೀಂ ತಲವಾರಿನೇಟಿಗೆ ಉಸಿರು ಚೆಲ್ಲಿದ್ದರು.

ಈ ಘಟನೆಯ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ‌ ಬಂಟ್ವಾಳ ಸಹಿತ ಐದು ತಾಲೂಕಿನಲ್ಲಿ‌ ನಿಷೇಧಾಜ್ಣೆ ಜಾರಿಯಲ್ಲಿದ್ದು, ಬಿ.ಸಿ.ರೋಡು,ಬಂಟ್ವಾಳದಲ್ಲಿ ರಾತ್ರಿ‌ 8 ಗಂಟೆಯಾಗುತ್ತಲೇ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತು ಆಯೋಜಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!