ಬೆಳಗ್ಗೆ ಎದ್ದ ತಕ್ಷಣ ಮನಸ್ಸು ಪ್ರಫುಲ್ಲವಾಗಿರಬೇಕು ಎನ್ನುವುದು ಎಲ್ಲರ ಆಸೆ. ಆದರೆ ಅನೇಕರಿಗೆ ಎದ್ದ ಕೂಡಲೇ ಅಸಹನೆ, ಕೋಪ ಅಥವಾ ಸಣ್ಣ ವಿಷಯಕ್ಕೂ ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ವೈದ್ಯಕೀಯ ಮತ್ತು ಜೀವನಶೈಲಿಯ ಈ ಕೆಳಗಿನ ಅಂಶಗಳು ಕಾರಣವಾಗಿರಬಹುದು:
ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ಮೆದುಳು ಪೂರ್ಣ ಪ್ರಮಾಣದಲ್ಲಿ ವಿಶ್ರಾಂತಿ ಪಡೆಯುವುದಿಲ್ಲ. ಇದರಿಂದ ‘ಅಮಿಗ್ಡಾಲಾ’ (ಮೆದುಳಿನ ಭಾವನೆಗಳನ್ನು ನಿಯಂತ್ರಿಸುವ ಭಾಗ) ಅತಿಯಾಗಿ ಪ್ರತಿಕ್ರಿಯಿಸಲು ಶುರು ಮಾಡುತ್ತದೆ, ಇದು ಕೋಪಕ್ಕೆ ಕಾರಣವಾಗುತ್ತದೆ.
ರಾತ್ರಿಯ ಊಟದ ನಂತರ ದೀರ್ಘಕಾಲದವರೆಗೆ ಹೊಟ್ಟೆ ಖಾಲಿಯಿರುತ್ತದೆ. ಬೆಳಗ್ಗೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾದಾಗ, ಮೆದುಳು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ನಂತಹ ಹಾರ್ಮೋನ್ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನುಷ್ಯನನ್ನು ಚಿಂತಿತನನ್ನಾಗಿ ಅಥವಾ ಕೋಪಿಷ್ಠನನ್ನಾಗಿ ಮಾಡುತ್ತದೆ.
ದೇಹದಲ್ಲಿ ನೀರಿನಂಶ ಕಡಿಮೆಯಾದರೂ ತಲೆನೋವು ಮತ್ತು ಕಿರಿಕಿರಿ ಉಂಟಾಗುತ್ತದೆ. ಇನ್ನು ಅತಿಯಾದ ಕಾಫಿ/ಟೀ ಕುಡಿಯುವ ಅಭ್ಯಾಸವಿದ್ದು, ಬೆಳಗ್ಗೆ ಅದು ಸಿಗದಿದ್ದಾಗ ‘ವಿತ್ಡ್ರಾಯಲ್ ಸಿಂಪ್ಟಮ್ಸ್’ ಆಗಿ ಸಿಟ್ಟು ಬರಬಹುದು.
ದಿನವಿಡೀ ಮಾಡಬೇಕಾದ ಕೆಲಸಗಳ ಒತ್ತಡ ಅಥವಾ ಮನಸ್ಸಿನಲ್ಲಿರುವ ಆತಂಕಗಳು ಕಣ್ಬಿಟ್ಟ ತಕ್ಷಣ ನೆನಪಾದಾಗ, ಮನಸ್ಸು ರಕ್ಷಣಾತ್ಮಕವಾಗಿ ಕೋಪವನ್ನು ಹೊರಹಾಕುತ್ತದೆ.



