ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ತುಳುನಾಡ ವೈಭವ ಕಂಬಳ ಪಂದ್ಯ ನಡೆಯುತ್ತಿದೆ. ಎರಡನೇ ದಿನವಾದ ಇಂದು ಏನೆಲ್ಲಾ ಕಾರ್ಯಕ್ರಮಗಳಿವೆ? ಇಲ್ಲಿದೆ ಮಾಹಿತಿ..
ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ, ಮಧ್ಯಾಹ್ನ 1 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಧಕ ಕುಸ್ತಿಪಟುಗಳಿಗೆ ಸನ್ಮಾನ, ಸಂಜೆ 4 ಗಂಟೆಗೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ನಂತರ ಸಮಾರೋಪ ನಡೆಯಲಿದೆ. ಇನ್ನು ವೇದಿಕೆ ಎರಡರಲ್ಲಿ ಕರಂಗೋಲು ನೃತ್ಯ, ಯಕ್ಷಗಾನ, ನೃತ್ಯ, ಸೆಲೆಬ್ರಿಟಿಗಳಿಂದ ಸಂಗೀತ ಸಂಜೆ, ಅರ್ಜುನ್ ಜನ್ಯ ರಸಸಂಜೆ ಕಾರ್ಯಕ್ರಮ ನಡೆಯಲಿದೆ.