SHOCKING| ಗದ್ದೆಯಲ್ಲಿ ದೈತ್ಯ ಮೊಸಳೆ: ರೈತರು ಮಾಡಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಸಳೆಗಳನ್ನು ನದಿ, ಕೊಳ, ಹಳ್ಳಗಳಲ್ಲಿ ಕಾಣೋದು ಕಾಮನ್.‌ ಆದ್ರೆ ಏಕಾಏಕಿ ಹೀಗೆ ಗದ್ದೆಗಳಲ್ಲಿ ಕಂಡರೆ? ಹೀಗೆ ತನ್ನ ಹೊಲದಲ್ಲಿ ದೈತ್ಯ ಮೊಸಳೆ ಕಂಡು ಬೆಚ್ಚಿಬಿದ್ದಿದ್ದಾರೆ. ನೆರೆ ರಾಜ್ಯ ತೆಲಂಗಾಣದ ವನಪರ್ತಿ ಜಿಲ್ಲೆಯ ರೈತನ ಹೊಲದಲ್ಲಿ ಈ ಘಟನೆ ನಡೆದಿದೆ. ಮೊಸಳೆಯನ್ನು ನೋಡಿದ ರೈತ ಸ್ಥಳೀಯ ರೈತರ ಸಹಾಯದಿಂದ ಅದನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಅದು ಸಾಧ್ಯವಾಗದ ಕಾರಣ ಯಂತ್ರದ ಸಹಾಯದಿಂದ ಮೊಸಳೆಯನ್ನು ಹೊರ ತೆಗೆದಿದ್ದಾರೆ.

ವನಪರ್ತಿ ಜಿಲ್ಲೆಯ ಪೆದ್ದಮಂದಡಿ ಮಂಡಲದ ವೆಲ್ತೂರಿನಲ್ಲಿ ಬೃಹತ್ ಮೊಸಳೆಯೊಂದು ಬೆಳೆ ಜಮೀನಿಗೆ ನುಗ್ಗಿದೆ. ರೈತನ ಕೂಗಾಟನ್ನು ಕೇಳಿದ ಮೊಸಳೆ ಪಕ್ಕದ ಮತ್ತೊಬ್ಬ ರೈತನ ಹೊಲದ ಗುಂಡಿಗೆ ಹೋಗಿದೆ. ರೈತ ಗ್ರಾಮಸ್ಥರಿಗೆ ವಿಷಯ ತಿಳಿಸಿದಾಗ ಅಲ್ಲಿಗೆ ಆಗಮಿಸಿದ ಗ್ರಾಮಸ್ಥರು ಮೊಸಳೆ ಹಿಡಿಯಲು ಯತ್ನಿಸಿದರು. ವನಪರ್ತಿಯಲ್ಲಿರುವ ಸಾಗರ್ ಸ್ನೇಕ್ ಸೊಸೈಟಿಯ ವ್ಯವಸ್ಥಾಪಕರು ಗೃಹರಕ್ಷಕ ಕೃಷ್ಣಸಾಗರ್ ಅವರಿಗೆ ಮಾಹಿತಿ ನೀಡಿದ್ದಾರೆ. ಎಷ್ಟು ಪ್ರಯತ್ನ ಮಾಡಿದರೂ ಮೊಸಳೆಯನ್ನು ಹಿಡಿಯಲು ಸಾಧ್ಯವಾಗಲಿಲ್ಲ.

ರೈತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸ್‌ಐ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳ ತಲುಪಿದರು. ಪೊಕ್ಲೈನ್ ಯಂತ್ರದ ಮೂಲಕ ಹೊರತೆಗೆದು ಅರಣ್ಯಾಧಿಕಾರಿಗಳ ಆದೇಶದಂತೆ ಜುರಾಲಾ ಯೋಜನೆಯ ನೀರಿಗೆ ಮೊಸಳೆ ಬಿಡಲಾಗಿದೆ. ವೆಲ್ತೂರು ಗ್ರಾಮದ ಬಳಿ ರೈತರೊಬ್ಬರು ಕೆರೆಯ ಕೆಳಗೆ ಭತ್ತದ ಕೃಷಿ ಮಾಡುತ್ತಿದ್ದು, ಆ ಕೆರೆಯಿಂದ ಮೊಸಳೆ ಜಮೀನಿಗೆ ಬಂದಿದೆ ಎಂದು ರೈತರು ತಿಳಿಸಿದ್ದಾರೆ. ಮೊಸಳೆ ಜಮೀನಿಗೆ ನುಗ್ಗಿದ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!