BIG NEWS | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಗೆ ಜೀವ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸಿಖ್ ಫಾರ್ ಜಸ್ಟಿಸ್ (SFJ) ನ ಭಯೋತ್ಪಾದಕ ಗುರುಪತ್ವಾನ್ ಸಿಂಗ್ ಪನ್ನು ಜೀವ ಬೆದರಿಕೆ ಹಾಕಿದ್ದಾನೆ.

ಅಸ್ಸಾಂನಲ್ಲಿ ಜೈಲಿನಲ್ಲಿರುವ ಖಲಿಸ್ತಾನ್ ಪರ ಬೆಂಬಲಿಗರಿಗೆ ಚಿತ್ರಹಿಂಸೆ ನೀಡಲಾಗಿದೆ. ಸಿಎಂ ಶರ್ಮಾರವರೆ, ಈ ಹಿಂಸಾಚಾರಕ್ಕೆ ಬಲಿಯಾಗಬೇಡಿ. ಖಲಿಸ್ತಾನ್ ಪರ ಸಿಖ್ಖರು ಮತ್ತು ಭಾರತೀಯ ಆಡಳಿತದ ನಡುವೆ ಹೋರಾಟ ನಡೆಯುತ್ತಿದೆ ಎಂದು ಬೆದರಿಕೆ ಹಾಕಲಾಗಿದೆ.

ಖಾಲಿಸ್ತಾನ್ ಜನಾಭಿಪ್ರಾಯದ ಶಾಂತಿಯುತ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ನಾವು ಭಾರತದ ಆಕ್ರಮಣದಿಂದ ಪಂಜಾಬ್ ಅನ್ನು ವಿಮೋಚನೆಗೊಳಿಸುತ್ತೇವೆ. ನಿಮ್ಮ ಸರ್ಕಾರವು ಅವರನ್ನು ಚಿತ್ರಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರೆ, ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!