ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ಗೆ ಬಿಪರ್ಜೊಯ್ ಚಂಡಮಾರುತ ಅಪ್ಪಳಿಸಿದ್ದು, ಜನಜೀವನ ಅಲ್ಲೋಲ ಕಲ್ಲೋಲವಾಗಿದೆ. ಸಾಕಷ್ಟು ಮಂದಿ ಮನೆ, ಮಠ ಕಳೆದುಕೊಂಡು ಆಶ್ರಯ ತಾಣಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಹಗಲು ರಾತ್ರಿ ಎನ್ನದೇ ಎನ್ಡಿಆರ್ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಜನರ ಸುರಕ್ಷತೆಗಾಗಿ ಪಣ ತೊಟ್ಟಿದ್ದಾರೆ.
ಕಡಲ ಕಿನಾರೆಗೆ ಈಗಾಗಲೇ ಅಲೆಗಳು ಅಪ್ಪಳಿಸಿದ್ದು, ಹಲವು ಕಟ್ಟಡಗಳು ಜಲಾವೃತಗೊಂಡಿವೆ. ಇಲ್ಲಿ ಸಿಲುಕಿರುವ ಸಾಕಷ್ಟು ಜನರನ್ನು ಎನ್ಡಿಆರ್ಎಫ್ ತಂಡ ರಕ್ಷಿಸಿ ಸ್ಥಳಾಂತರಿಸಿದೆ.
ಬಿಪರ್ಜೊಯ್ ಚಂಡಮಾರುತದಿಂದಾಗಿ ಈಗಾಗಲೇ 23 ಮಂದಿ ಗಾಯಗೊಂಡಿದ್ದಾರೆ. ಜಾನುವಾರುಗಳ ರಕ್ಷಣೆಗೆ ತೆರಳಿದ್ದ ತಂದೆ, ಮಗ ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ.