ಹೊಸದಿಗಂತ ವರದಿ, ಬಳ್ಳಾರಿ:
ನಗರದ ಬಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರ ಪಧಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಟಿ.ಅವರಿಗೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶ್ರೀರಾಮನ ವಿಗ್ರಹವನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮಾಜಿ ಸಚಿವ ಬಿ.ಶ್ರೀರಾಮುಲು, ಪರಿಷತ್ ಸದಸ್ಯ ರವಿ ಕುಮಾರ್ , ವೈ.ಎಂ.ಸತೀಶ್, ಮಾಜಿ ಶಾಸಕರಾದ ಸುರೇಶ್ ಬಾಬು, ಎಂ.ಎಸ್.ಸೋಮಲಿಂಗಪ್ಪ, ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾ ಸಹ ಪ್ರಭಾರಿ ಚಂದ್ರಶೇಖರ್ ಪಾಟೀಲ್ ಹಲಗೇರಿ, ಪೂಜೆಪ್ಪ, ಏರೇಂಗಳಿ ತಿಮ್ಮಾರೆಡ್ಡಿ, ಡಾ.ಅರುಣಾ, ಪಾರ್ವತಿ ಇಂದು ಶೇಖರ್, ರಮಂಜೀನಿ, ವೆಂಕಟೇಶ್ವರ, ಎಂ.ಸಂಜಯ್, ಶಿವಶಂಕರ್ ರೆಡ್ದಿ, ಎಸ್.ಗುರುಲಿಂಗನಗೌಡ್ರು, ಕೆ.ರಾಮಲಿಂಗಪ್ಪ, ಮುರಹರಗೌಡ ಸೇರಿದಂತೆ ಇತರರು ಇದ್ದರು.