ದಿಗಂತ ವರದಿ ಮಂಗಳೂರು:
ಸದ್ಯದಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಮತ್ತೆ ಆಡಳಿತ ಹಿಡಿಯಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಪಣಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಟನಾಸಿಯೋ ಮಾನ್ಸೆರಾಟೆ ಅವರ ಪರ ಚುನಾವಣಾ ಪ್ರಚಾರ ಮಾಡಿದ ಶಾಸಕ ವೇದವ್ಯಾಸ್ ಕಾಮತ್, ಪಣಜಿ ವಿಧಾನಸಭೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದ ಗೆಲುವು ಸಾಧಿಸಲಿದೆ. ಗೋವಾ ಸರಕಾರದ ಜನಪರ ಆಡಳಿತವನ್ನು ಮತದಾರ ಪ್ರಭು ಮೆಚ್ಚಿಕೊಂಡಿದ್ದಾನೆ. ಹಾಗಾಗಿ ಗೋವಾದಲ್ಲಿ ಬಿಜೆಪಿ ಮತ್ತೊಮ್ಮೆ ಆಡಳಿತಕ್ಕೇರಲಿದೆ ಎಂದು ಹೇಳಿದರು.