ಹೊಸ ದಿಗಂತ ವರದಿ ವಿಜಯಪುರ:
ಸಬ್ ಕಾ ಸಾತ್, ಸಬ್ ಕಾ ವಿಕಾಸ ಬರೀ ಬಿಜೆಪಿ ಮಾತ್ತಲ್ಲೇ ಇದೆ. ಬಿಜೆಪಿ ಮುಸ್ಲಿಂರ ವಿರುದ್ಧ ಇದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಿಡಿಕಾರಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದಿಂದ ಮುಸ್ಲಿಂರ ಗಡ್ಡ, ಊಟ, ಟೋಪಿಗೆ ತೊಂದರೆ ಇದೆ ಎಂದು ದೂರಿದರು.
ಬಿಜೆಪಿ ಹಲಾಲ್ ಕಟ್ ಮಾಡಿ ತಮ್ಮ ಕಮಿಷನ್ ಮಾಡಿಕೊಳ್ಳುತ್ತಿದೆ. ಹಲಾಲ್ ವಿಚಾರದಲ್ಲಿ ಬಿಜೆಪಿ ಹಲಾಲ್ ಕಮಿಷನ್ ಮಾಡುತ್ತಿದೆ. ನಮ್ಮ ಹಲಾಲ್ ಮಾಂಸವನ್ನು ಮಾತ್ರ ಬಿಜೆಪಿಯವರು ಕೆಟ್ಟರೀತಿಯಾಗಿ ನೋಡುತ್ತಾರೆ. ಬಿಜೆಪಿ ಕಮಿಷನ್ ಬಗ್ಗೆ ವಿಡಿಯೋಗಳಿವೆ ಎಂದು ಆರೋಪಿದರು.
ನಾವು ಪಾಕಿಸ್ಥಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ, ಶಾಸಕ ಯತ್ನಾಳ ಪದೇ ಪದೇ ಪಾಕಿಸ್ಥಾನ ಹೆಸರು ಉಲ್ಲೇಖ ಮಾಡ್ತಾರೆ. ಪಾಕಿಸ್ಥಾನ ಮೇಲೆ ಅವರಿಗೆ ಪ್ರೀತಿ ಇದೆ.ಯಾಕೇ ಪಾಕಿಸ್ತಾನದ ಮೇಲೆ ಪ್ರಿತಯಿದೆ ಎಂಬುದು ಅವರಿಗೇ ಗೊತ್ತು, ನನಗೆ ಗೊತ್ತಿಲ್ಲ ಎಂದರು.
ಪ್ರಧಾನಿ ಮೋದಿ ಯತ್ನಾಳರಿಗೆ ಹೇಳಿಕೊಟ್ಟಿರಬಹುದು. ಅದಕ್ಕಾಗಿ ಪದೇ ಪದೇ ಪಾಕಿಸ್ಥಾನ ಹೆಸರು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.