ವರನ ತಾಯಿ ಕುರುಡು ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ ವಧು

 ಹೊಸದಿಗಂತ ವರದಿ,ಚಿಕ್ಕೋಡಿ:

ತಾಲ್ಲೂಕಿನ ನವಲಿಹಾಳ ಗ್ರಾಮದ ಶೃತಿ ಶಂಕರ ಬುರುಡ (೨೪) ಎಂಬುವವರು ವರನ ತಾಯಿ ಕುರುಡು ಎಂದು ತಿಳಿದು ಮದುವೆಯ ಹಿಂದಿನ ದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ ೨೪ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೇ ೨೫ರಂದು ಮದುವೆ ನಡೆಯಬೇಕಿತ್ತು. ಮೇ ೨೪ರಂದು ರಾತ್ರಿ ಅರಿಷಿಣ ಹಚ್ಚುವ ಕಾರ್ಯಕ್ರಮವಿತ್ತು. ಅದೇ ದಿನ ರಾತ್ರಿ ಶೃತಿ ಮನೆಯಿಂದ ಕಾಣೆಯಾಗಿದ್ದು, ಮರುದಿನ ನವಲಿಹಾಳ ಗ್ರಾಮದ ಬಾವಿಯೊಂದರಲ್ಲಿ ಶೃತಿಯ ಮೃತದೇಹ ಪತ್ತೆಯಾಗಿದೆ. ನವಲಿಹಾಳ ಗ್ರಾಮದ ಶೃತಿ ಬುರಡ ಮದುವೆಯು ಬೆಳಗಾವಿಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಈ ಕುರಿತು ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!