ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಡಾಕ್ನಲ್ಲಿ ಶಾಂತಿಗಾಗಿ ಬೌದ್ಧ ಸನ್ಯಾಸಿಗಳು ಬೃಹತ್ ಮೆರವಣಿಗೆ ನಡೆಸಿದ್ದು, ಈ ವೇಳೆ ದೇಶದ ಶಾಂತಿ ಕಾಪಾಡುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಅತ್ಯುತ್ತಮವಾದ್ದು ಎಂದು ಸನ್ಯಾಸಿಗಳು ಹೇಳಿದ್ದಾರೆ.
ಥಾಯ್ಲೆಂಡ್ನ ಬೌದ್ಧ ಸನ್ಯಾಸಿಗಳು ವಿಶ್ವ ಶಾಂತಿಗಾಗಿ 32 ದಿನ ಉಪವಾಸ ಕೈಗೊಂಡಿದ್ದು, ನಿನ್ನೆ ಲಡಾಖ್ನಲ್ಲಿ ಮುಕ್ತಾಯವಾಗಿದೆ. ಈ ಬೃಹತ್ ನಡಿಗೆಯಲ್ಲಿ ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರದ ಸಂಸ್ಥಾಪಕ ಮಾತನಾಡಿದ್ದು, ಇಡೀ ಜಗತ್ತು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ದೇಶಕ್ಕೆ ಬೇಕಿರುವ ಶಾಂತಿ, ಸೌಹಾರ್ದತೆ ತರುವ ಮಹಾನ್ ನಾಯಕ ಪ್ರಧಾನಿ ಮೋದಿ ಆಗಿದ್ದಾರೆ ಎಂದು ಹೇಳಿದ್ದಾರೆ.