ಹೊಸದಿಗಂತ ವರದಿ ಸೋಮವಾರಪೇಟೆ:
ವೀರಶೈವ ಸಮಾಜದ ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ಚಂದ್ರಕಲಾ ಗಿರೀಶ್ ಆಯ್ಕೆಯಾಗಿದ್ದಾರೆ.
ಪಟ್ಟಣದ ಕರ್ಕಳ್ಳಿಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ಹಿಂದಿನ ಸಾಲಿನ ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಉಪಾಧ್ಯಕ್ಷರಾಗಿ ಗೀತಾ ರಾಜು, ಕಾರ್ಯದರ್ಶಿಯಾಗಿ ಮಾಯಾ ಗಿರೀಶ್, ಸಹ ಕಾರ್ಯದರ್ಶಿಯಾಗಿ ದಿವ್ಯಾ ದಯಾಕರ್, ಖಜಾಂಚಿಯಾಗಿ ಸರಿತಾ ಮಲ್ಲಿಕಾರ್ಜುನ್, ನಿರ್ದೇಶಕರುಗಳಾಗಿ ಆಶಾ ಹೂವಯ್ಯ,ನಂದಿನಿ ಮಹಂತೇಶ್, ಸವಿತಾ ನೀಲಕಂಠ, ಜಗದಾಂಬ ಗುರುಪ್ರಸಾದ್, ಸವಿತಾ ಶಿವಕುಮಾರ್, ರಜನಿ ಯತೀಶ್, ಮಂಜುಳಾ ಬಸವರಾಜು, ಅನು ರಾಜು ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.