ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು, ಆಂಧ್ರಪ್ರದೇಶದಲ್ಲಿ ರೌದ್ರನರ್ತನ ತೋರಿದ ನಂತರ ಇದೀಗ ಮಿಂಚೌಂಗ್ ಚಂಡಮಾರುತ ತಣ್ಣಗಾಗಿದೆ.
ಆದರೆ ಚಂಡಮಾರುತದ ಹೊಡೆತದಿಂದಾದ ಅನಾಹುತಗಳಿಂದ ಮಾತ್ರ ಜನ ಇನ್ನೂ ಚೇತರಿಸಿಕೊಂಡಿಲ್ಲ. ಭಾರೀ ಮಳೆಯಿಂದ ಚೆನ್ನೈ ಹಾಗೂ ಇನ್ನಿತರ ನಗರಗಳು ಜಲಾವೃತವಾಗಿವೆ, ಇನ್ನೂ ಸಾಕಷ್ಟು ಮಂದಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಭಾರತೀಯ ವಾಯುಪಡೆಯ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಚಂಡಮಾರುತದ ಹೊಡೆತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲಾಗುತ್ತಿದೆ.
ತಾಂಬರಂ, ಮಡಿಚುರ್, ವೆಲಚೇರಿ ಹಾಗೂ ಪಲ್ಲಿಕರನೇ ಚಂಡಮಾರುತದಿಂದ ಸಾಕಷ್ಟು ಹಾನಿಗೀಡಾಗಿದೆ. ಸರ್ಕಾರ ಹಾಗೂ ವಾಯುಪಡೆಯ ರಕ್ಷಣಾ ತಂಡಗಳು ಜನರಿಗೆ ಪರಿಹಾರ ಸಾಮಾಗ್ರಿಗಳನ್ನು ಒದಗಿಸುತ್ತಿದ್ದಾರೆ.
ಚೇತಕ್ ಹೆಲಿಕಾಪ್ಟರ್ಗಳ ಮೂಲಕ ಜನರನ್ನು ರಕ್ಷಣೆ ಮಾಡಲಾಗುತ್ತಿದೆ. ಚಂಡಮಾರುತದಿಂದಾಗಿ ಅಂಗಡಿಗಳಲ್ಲಿ ದಿನಸಿ ಕೊಳ್ಳಲಾರದಷ್ಟು ದುಬಾರಿಯಾಗಿದೆ. ರಕ್ಷಣಾ ಸಿಬ್ಬಂದಿ ಹಾಲು,ನೀರು, ಬ್ರೆಡ್, ಬಿಸ್ಕೆಟ್ ಹಾಗೂ ಕೆಲ ದಿನಸಿ ಸಾಮಾನುಗಳನ್ನು ವಿತರಿಸಿ ಸಹಾಯ ಮಾಡುತ್ತಿದ್ದಾರೆ.