ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಎಸ್‌ಟಿಎಫ್ ಯೋಧನಿಗೆ ಛತ್ತೀಸ್‌ಗಢ ಸಿಎಂ ನಮನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜುಲೈ 17 ರಂದು ಬಿಜಾಪುರ ಜಿಲ್ಲೆಯ ತಾರೆಮ್ ಪ್ರದೇಶದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ವಿಶೇಷ ಕಾರ್ಯಪಡೆಯ ಯೋಧ ಭರತ್ ಲಾಲ್ ಸಾಹು ಅವರಿಗೆ ನಡೆದ ಮಾಲಾರ್ಪಣೆ ಸಮಾರಂಭದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳು ಜವಾನನಿಗೆ ಶ್ರದ್ಧಾಂಜಲಿ ಅರ್ಪಿಸಿದರು ಮತ್ತು ಯೋಧನ ಪಾರ್ಥೀವ ಶರೀರವನ್ನು ಕೊಂಡೊಯ್ದರು.

ದಾಳಿಯ ಕುರಿತು ಮಾತನಾಡಿದ ಸಾಯಿ, “ಜುಲೈ 17 ರಂದು ಘಟನೆ ಸಂಭವಿಸಿದೆ. ಬಿಜಾಪುರದಲ್ಲಿ ಐಇಡಿ ಸ್ಫೋಟ ಸಂಭವಿಸಿದೆ, ಇದರಲ್ಲಿ ನಮ್ಮ ಇಬ್ಬರು ಎಸ್‌ಟಿಎಫ್ ಜವಾನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಜವಾನರು ಗಾಯಗೊಂಡಿದ್ದಾರೆ. ಗಾಯಗೊಂಡ ನಾಲ್ವರು ಯೋಧರು ಈಗ ಅಪಾಯದಿಂದ ಪಾರಾಗಿದ್ದಾರೆ.”

ಇದಲ್ಲದೆ, ರಾಜ್ಯದಲ್ಲಿ ನಕ್ಸಲಿಸಂ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿದ್ದು, ನಕ್ಸಲ್ ವಾದವನ್ನು ಕೊನೆಗಾಣಿಸುತ್ತೇವೆ ಎಂದ ಅವರು, ನಕ್ಸಲಿಸಂ ವಿರುದ್ಧ ನಾವು ಬಲವಾಗಿ ಹೋರಾಡುತ್ತಿದ್ದೇವೆ, ರಾಜ್ಯದಲ್ಲಿ ನಕ್ಸಲಿಸಂ ಅನ್ನು ಶೀಘ್ರವೇ ಕೊನೆಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!