ಶಬರಿಮಲೆ ರೋಪ್‌ವೇ ನಿರ್ಮಾಣಕ್ಕೆ ಷರತ್ತು: ಅರಣ್ಯ ಇಲಾಖೆ ’ಷರತ್ತು’ ಕಿರಿಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳವಾದ ಶಬರಿಮಲೆಯಲ್ಲಿ ರೋಪ್‌ವೇ ನಿರ್ಮಾಣಕ್ಕೆ ವಿಘ್ನ ಎದುರಾಗಿದೆ.
ರೋಪ್ ವೇಗೆ ಅರಣ್ಯ ಇಲಾಖೆ ಷರತ್ತು ವಿಧಿಸಲು ಸಿದ್ಧತೆ ನಡೆಸಿದ್ದು, ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ, ರೋಪ್‌ವೇಯಲ್ಲಿ ಜನರನ್ನು ಸಾಗಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.

ಪಂಪಾ ಬೆಟ್ಟದ ತುದಿಯಿಂದ ಶಬರಿಮಲೆ ಸನ್ನಿಧಾನದ ಪೋಲೀಸ್ ಬ್ಯಾರಕ್‌ವರೆಗೆ ರೋಪ್‌ವೇ ಯೋಜನೆಗೆ ಅನುಮತಿ ಕೋರಿ ತಿರುವಾಂಕೂರು ದೇವಸ್ವಂ ಮಂಡಳಿ ಈಗಾಗಲೇ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದೆ. ಈ ಅರ್ಜಿಯನ್ನು ಮುಂದಿನ ಸಭೆಯಲ್ಲಿ ಪರಿಗಣಿಸುವ ಸಾಧ್ಯತೆ ಇದ್ದು, ಆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಈ ನಡುವೆ ರೋಪ್ ವೇನಲ್ಲಿ ದೇವಾಲಯಕ್ಕೆ ಸಾಮಗ್ರಿಗಳನ್ನು ಸಾಗಿಸಲು ಮಾತ್ರ ಅನುಮತಿ ನೀಡಲಾಗುವುದು. ರೋಪ್‌ವೇ ಸಾಕಾರಗೊಂಡರೆ ಅರಣ್ಯ ಇಲಾಖೆ ಟ್ರ್ಯಾಕ್ಟರ್ ಸೇವೆಗೆ ಕೂಡಾ ಅವಕಾಶ ನೀಡುವುದಿಲ್ಲ ಎಂಬ ಮಾಹಿತಿಗಲೂ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!