ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಕೋವಿಡ್ ಬಾತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ.
ಸೋಂಕು ಬಾತರ ಜೊತೆಗೆ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದ್ದು, ಈ ನಡುವೆ ಹೆಚ್ಚು ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೋವಿಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಜಾಗರೂಕರಾಗಿರಿ ಎಂದು ಮತ್ತೆ ಆರೋಗ್ಯ ಸಚಿವೆ ಪುನರುಚ್ಛರಿಸಿದ್ದಾರಾದರೂ ಜನತೆಯಲ್ಲಿ ಆತಂಕ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಪ್ರತೀ ಜಿಲ್ಲೆಗಳಲ್ಲಿ ನಿಗಾ ಇರಿಸಲು ಆರೋಗ್ಯ ಇಲಾಖೆ ಜಿಲ್ಲಾ ವೈದ್ಯಕೀಯ ಅಕಾರಿಗಳಿಗೆ ಸೂಚಿಸಿದೆ. ವೈರಸ್ ರೂಪಾಂತರಗೊಂಡಿದೆಯೇ ಎಂದು ಕಂಡುಹಿಡಿಯಲು ಮಾದರಿ ಪರೀಕ್ಷೆ ಕೂಡಾ ಪ್ರಾರಂಭವಾಗಿದೆ. ಸಧ್ಯ ದೇಶದಲ್ಲಿರುವ ಕೋವಿಡ್ ಬಾತರ ಪೈಕಿ ಶೇ.೮೦ ರಷ್ಟು ಪ್ರಕರಣ ಕೇರಳದಲ್ಲಿಯೇ ಇದೆ.