ಕೃಷಿ ತೋಟದಲ್ಲಿ ಹಸು ನಿಗೂಢ ಸಾವು: ತಡರಾತ್ರಿ ಮತ್ತೆ‌ ನುಗ್ಗಿತೇ ಕಾಡಾನೆ ಪಡೆ?

ಹೊಸದಿಗಂತ ವರದಿ ಕಡಬ:

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೋಣಾಜೆ ಎಂಬಲ್ಲಿನ ಸಿಆರ್‌ಸಿ ಕಾಲೋನಿ ಬಳಿ ಹಸುವೊಂದರ ಕಳೇಬರ ಅಡಿಕೆ ತೋಟದಲ್ಲಿ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈ ನಡುವೆ ತಡರಾತ್ರಿ ತೋಟಕ್ಕೆ ನುಗ್ಗಿದ ಆನೆ ಈ ಹಸುವಿನ ಮೇಲೆ ದಾಳಿ ನಡೆಸಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಮೇಯಲು ಬಿಟ್ಟಿದ್ದ ಹಸು ಬೆಳಗ್ಗೆಯಾದರೂ ವಾಪಸ್ಸಾಗದ ಹಿನ್ನೆಲೆಯಲ್ಲಿ ಮನೆಮಂದಿ ಇಂದು ಹುಡುಕಾಟಕ್ಕೆ ಮುಂದಾಗಿದ್ದರು. ಈ ವೇಳೆ ಹಸು ಗಂಭೀರ ಗಾಯಗೊಂಡು ಸತ್ತುಬಿದ್ದಿರುವುದು ಕಂಡುಬಂದಿದೆ.

ಇದೇ ಪರಿಸರಸಲ್ಲಿ ಕೃಷಿ ಪೈಪ್ ಗಳಿಗೂ ಹಾನಿಯಾಗಿರುವುದು ಕಂಡಿದ್ದು, ಕಳೆದ ರಾತ್ರಿ ಆನೆ ಪಡೆ ಇಲ್ಲಿಗೆ ಲಗ್ಗೆಯಿಟ್ಟಿತ್ತು ಎಂಬ ಸಂಶಯ ಸ್ಥಳೀಯರಿಗಿದೆ.

ಸ್ವಷ್ಟ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!