ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್ಜೊಯ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಇದೀಗ ಸೈಕ್ಲೋನ್ ಗುಜರಾತ್ಗೆ ಎಂಟ್ರಿ ನೀಡುತ್ತಿದೆ.
ನಾಳೆ ಸಂಜೆಯ ವೇಳೆಗೆ ಚಂಡಮಾರುತ ಕಛ್ಗೆ ಅಪ್ಪಳಿಸಲಿದ್ದು,ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. 58 ವರ್ಷಗಳಲ್ಲಿ ಜೂನ್ನಲ್ಲಿ ಕಾಣಿಸುತ್ತಿರುವ ಮೂರನೇ ಅತಿದೊಡ್ಡ ಚಂಡಮಾರುತ ಇದಾಗಿದೆ.
ಅಲ್ಲದೇ ಗುಜರಾತ್ಗೆ ಅಪ್ಪಳಿಸುತ್ತಿರುವ ಅತಿದೊಡ್ಡ ಮೊದಲ ಚಂಡಮಾರುತ ಇದಾಗಿದೆ. ಮುಂಬೈ ಹಾಗೂ ಗುಜರಾತ್ನ ಕರಾವಳಿ ತೀರಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಮೀನುಗಾರರಿಗೆ ನೀರಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ಊಟದ ವ್ಯವಸ್ಥೆ ಜೊತೆ ಜನರಿಗೆ ತಾತ್ಕಾಲಿಕ ಆಶ್ರಯ ಸಿದ್ಧವಾಗಿದೆ, ವೈದ್ಯಕೀಯ ತುರ್ತು ಪರಿಸ್ಥಿತಿಗೆ ಕ್ರಿಯಾ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ 69 ರೈಲುಗಳನ್ನು ರದ್ದು ಮಾಡಲಾಗಿದೆ. ಎನ್ಡಿಆರ್ಎಫ್ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್ನ ಘಟಕಗಳನ್ನು ಅನುಕೂಲಕ್ಕೆ ಆಗುವಂತೆ ನಿಯೋಜನೆ ಮಾಡಲಾಗಿದೆ.
ಕರಾವಳಿ ಭಾಗದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಕಳ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್ನಗರ್, ರಾಜ್ಕೋಟ್, ಜುನಾಗಢ ಹಾಗೂ ಮೊರ್ಬಿ ಜಿಲ್ಲೆಗಳಲ್ಲಿ ಚಂಡಮಾರುತದ ಅಬ್ಬರಕ್ಕೆ ಒಳಗಾಗಲಿವೆ.