ರಾಜಕೀಯಕ್ಕೆ ‘ಬಡವ ರಾಸ್ಕಲ್’ ಎಂಟ್ರಿ? ಮೈಸೂರಿನಿಂದ ಟಿಕೆಟ್ ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಮೈಸೂರಿನಿಂದ ನಟ ಡಾಲಿ ಧನಂಜಯ್‌ಗೆ ಟಿಕೆಟ್ ನೀಡಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಬಡವರ ಮಕ್ಕಳು ಬೆಳೀಬೇಕು ಎಂದು ಸದಾ ಹೇಳುವ ನಟ ಡಾಲಿ ಧನಂಜಯ್‌ರನ್ನು ಕಣಕ್ಕಿಳಿಸುವ ಪ್ಲ್ಯಾನ್ ಮಾಡುತ್ತಿದೆ.

ಮೈಸೂರು-ಕೊಡಗು ಭಾಗದಲ್ಲಿ ಬಿಜೆಪಿಯಿಂದ ಪ್ರತಾಪ್ ಸಿಂಹ ಯತೀಂದ್ರ ಸಿದ್ದರಾಮಯ್ಯ ಮಧ್ಯೆ ಹಣಾಹಣಿ ನಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಸಭೆಯಲ್ಲಿ ಡಾಲಿ ಧನಂಜಯ್ ಹೆಸರು ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!