ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಕ್ತಿ ಯೋಜನೆ ಜಾರಿಗೆ ಬಂದು ಸಾಕಷ್ಟು ಮಂದಿಗೆ ಸಹಾಯ ಆಗಿದೆ, ಆದರೆ ಸಾಕಷ್ಟು ಮಂದಿ ಪೇಚಿಗೆ ಕೂಡ ಸಿಲುಕಿದ್ದಾರೆ. ಹೆಂಗಸರು ಮನೆಯಲ್ಲಿಲ್ಲ ಬರೀ ಸುತ್ತುತ್ತಾರೆ ಅಂತ ಗಂಡಂದಿರು ಕಂಪ್ಲೆಂಟ್ ಮಾಡಿದ್ರೆ, ನಮ್ ಬಸ್, ಆಟೋ, ಓಲಾ, ಊಬರ್ಗೆ ಮಹಿಳೆಯರೇ ಬರ್ತಿಲ್ಲ ಎಂದು ಚಾಲಕರು ಕಣ್ಣೀರಿಡ್ತಿದ್ದಾರೆ.
ಬೆಂಗಳೂರಿನಲ್ಲಿ ಸಹೋದರಿಯರಿಬ್ಬರು ಅಪ್ಪ ಚಾಕ್ಲೆಟ್ಗೆ ದುಡ್ಡು ಕೊಡ್ತಿಲ್ಲ ಅಂತ ಬಸ್ ಹತ್ಕೊಂಡು ಧರ್ಮಸ್ಥಳಕ್ಕೆ ಹೋಗಿದ್ದಾರೆ. ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ ಎಂದು ತಂದೆ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದು, ಧರ್ಮಸ್ಥಳದಲ್ಲಿ ಬಾಲಕಿಯರು ಪತ್ತೆಯಾಗಿದ್ದಾರೆ.
ಅಪ್ಪನಿಗೆ ಚಾಕ್ಲೆಟ್ ಕೊಡಿಸೋಕೆ ಹೇಳಿದ್ವಿ. ಅವರು ಕೊಡಿಸಲಿಲ್ಲ, ಜೊತೆಗೆ ನಮ್ಮ ಮೇಲೆ ಕೂಗಾಡಿದ್ರು. ಸಿಟ್ಟು ಬಂದು ಬಸ್ ಹತ್ತಿದ್ವಿ, ಹೇಗೂ ಟಿಕೆಟ್ಗೆ ಹಣ ಕೊಡಬೇಕಿಲ್ಲ ಅಲ್ವಾ ಧರ್ಮಸ್ಥಳಕ್ಕೆ ಬಂದು ಇಳಿದಿದ್ದೇವೆ ಎಂದು ಮಕ್ಕಳು ಹೇಳಿದ್ದಾರೆ.
ಮಕ್ಕಳು ಕಾಣದೇ ಕೋಣನಕುಂಟೆ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಎರಡು ದಿನದ ಬಳಿಕ ಮಕ್ಕಳು ಧರ್ಮಸ್ಥಳದಲ್ಲಿ ಸಿಕ್ಕಿದ್ದಾರೆ. ಶಕ್ತಿ ಯೋಜನೆಯಿಂದ ಮಕ್ಕಳು ಈ ರೀತಿ ಮಾಡಿದ್ದು ಪೋಷಕರಿಗೆ ಬೇಸರ ತಂದಿದೆ.