ದಿನಭವಿಷ್ಯ: ಪುಣ್ಯ ಸ್ಥಳಗಳಿಗೆ ಹೋಗುವ ಕನಸು ಭಗ್ನ, ಬಂಧುಮಿತ್ರರ ಜೊತೆ ಕಲಹ

ಮೇಷ
ವೃತ್ತಿಯಲ್ಲಿ ಉದ್ವಿಗ್ನ ಸ್ಥಿತಿ ಎದುರಿಸುವಿರಿ.ಆದರೆ ಬಳಿಕ ಅದು ಶಮನ ಕಾಣಲಿದೆ. ಆತ್ಮೀಯರ ಸಹಕಾರ ಲಭ್ಯ. ಕೌಟುಂಬಿಕ ಸಾಮರಸ್ಯ.
ವೃಷಭ
ಮನೆಯಲ್ಲಿ ಭಿನ್ನಮತ ನಿವಾರಣೆಗೆ ಮುಕ್ತ ಮಾತುಕತೆ ಒಳಿತು.ಮನೆಯ ಒತ್ತಡ ಕೆಲಸದ ಮೇಲೂ ಪರಿಣಾಮ. ಶೀತ ಸಂಬಂಽ ಸಮಸ್ಯೆ.
ಮಿಥುನ
ಮನೆಯವರ ಜತೆ ಭಿನ್ನಮತ ಸಂಭವ. ಮಾತಿಗೆ ಪ್ರತಿಮಾತು ಜಗಳ ಹೆಚ್ಚಿಸುವುದು. ಹಾಗಾಗಿ ತಾಳ್ಮೆ ವಹಿಸಿ.   ಆರ್ಥಿಕ ಒತ್ತಡ.
ಕಟಕ
ಕೌಟುಂಬಿಕ ಕಲಹ. ಇತರರ ಭಾವನೆಗೂ ಬೆಲೆ ಕೊಡಿ. ನಿಮ್ಮದೇ ನಿಲುವಿಗೆ ಹಠ ಹಿಡಿಯದಿರಿ. ಆರೋಗ್ಯಪೂರ್ಣ ಆಹಾರವಷ್ಟೇ ಸೇವಿಸಿರಿ.
ಸಿಂಹ
ಕಾರ್ಯವೊಂದು ಪೂರ್ಣಗೊಳ್ಳದೆ ಉದ್ವಿಗ್ನತೆ.   ಇತರರ ಸಹಕಾರ ಅಗತ್ಯ. ಕೆಲವರು ಅನುಚಿತ ವರ್ತನೆ ತೋರಬಹುದು, ಅದಕ್ಕೆ ಆಸ್ಪದ ಕೊಡದಿರಿ.
ಕನ್ಯಾ
ಅಲ್ಪಕಾಲದಲ್ಲಿ ಪ್ರಮುಖ ಕಾರ್ಯ ಮುಗಿಸುವಿರಿ.  ಆರ್ಥಿಕ ಪರಿಸ್ಥಿತಿ ಸ್ಥಿರ. ಬಂಧುಗಳ ಸಹಕಾರದಿಂದ ಕೌಟುಂಬಿಕ ಸಮಸ್ಯೆ ನಿವಾರಣೆ.
ತುಲಾ
ಸಂಗಾತಿಯ ಮನದಿಂಗಿತ ಅರಿಯಿರಿ. ಪರಸ್ಪರರು ಅರಿತು ನಡೆದರೆ ಸಂಘರ್ಷ ತಪ್ಪುವುದು. ವೃತ್ತಿಯಲ್ಲಿ ತೃಪ್ತಿಕರ ವಾತಾವರಣ.
ವೃಶ್ಚಿಕ
ಜಗಳ, ವಿವಾದ ದಿಂದ ದೂರವಿರಿ. ಹೆಚ್ಚುವರಿ ಕೆಲಸದಿಂದ ಒತ್ತಡ ಹೆಚ್ಚು. ಆರ್ಥಿಕ ಬಿಕ್ಕಟ್ಟು ಕಾಡಬಹುದು. ಕೌಟುಂಬಿಕ ಕಲಹ.
ಧನು
ಹಣದ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಕೊಟ್ಟ ಹಣ ಸುಲಭದಲ್ಲಿ ಹಿಂದೆ ಬರದು. ಆರೋಗ್ಯ ಸಂಬಂಽತ ಸಮಸ್ಯೆ ನಿವಾರಣೆ. ಧನಪ್ರಾಪ್ತಿ.
ಮಕರ
ಹಣದ ಹರಿವು ಹೆಚ್ಚಳ. ಅದರೊಂದಿಗೆ ಒತ್ತಡವೂ ಅಽಕ. ವ್ಯವಹಾರದಲ್ಲಿ ಮಾತಿನ ಚಕಮಕಿ. ಶಾಂತಚಿತ್ತ ಕಾಯ್ದುಕೊಳ್ಳಿ.
ಕುಂಭ
ನಿಮ್ಮೊಡನೆ ಮುನಿಸಿಕೊಂಡವರನ್ನು ಒಲಿಸಲು ಆದ್ಯತೆ ಕೊಡಿ. ಕುಟುಂಬದಲ್ಲಿ ಸಣ್ಣ ಜಗಳಕ್ಕೆ ಆಸ್ಪದ ಕೊಡದಿರಿ. ವ್ಯವಹಾರದಲ್ಲಿ ಉನ್ನತಿ.
ಮೀನ
ಕಳೆದು ಹೋದ ಅವಕಾಶಕ್ಕಾಗಿ ಖೇದ ಪಡುವಿರಿ. ಕೌಟುಂಬಿಕ ಅಶಾಂತಿಯನ್ನು ಸರಿಪಡಿಸಿ. ಬಿಕ್ಕಟ್ಟು ದೀರ್ಘ ಎಳೆಯದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!