ದಿನಭವಿಷ್ಯ: ಬರಬೇಕಾದ ಹಣ ಇಂದು ಕೈಸೇರಲಿದೆ, ಆಸ್ತಿ ವಿವಾದ ಬಗೆಹರಿಯುವ ಸಾಧ್ಯತೆ

ಮೇಷ

ಬದಲಾವಣೆಗೆ ಒಗ್ಗಿಕೊಳ್ಳಿ. ವಿರೋಧ ಬೇಡ. ಕೆಲವರ ಸಂಗಡ ವೈರತ್ವಕ್ಕಿಂತ ಸ್ನೇಹ ಒಳಿತು. ಕೌಟುಂಬಿಕ ಹಿತಾಸಕ್ತಿ ಆದ್ಯತೆಯಲ್ಲಿರಲಿ.

ವೃಷಭ
ದೊಡ್ಡ ಸಮಸ್ಯೆ. ಪರಿಹಾರ ಕಷ್ಟ ಎಂಬಂತೆ ಭಾಸವಾದೀತು. ಧೃತಿಗೆಡಬೇಡಿ. ಸೂಕ್ತ ನೆರವು, ದೈವಕೃಪೆ ನಿಮಗೆ ಒದಗುವುದು.

ಮಿಥುನ
ಭಾವನಾತ್ಮಕ ಏರುಪೇರು. ದೃಢ ಮನಸ್ಸು  ಅವಶ್ಯ. ಆರೋಗ್ಯಕ್ಕೆ ಗಮನ ಕೊಡಿ. ಕುಟುಂಬದ ಭಿನ್ನಮತ ಉಲ್ಬಣಗೊಳಿಸಬೇಡಿ.

ಕಟಕ
ಇಂದು ಸಂಕಷ್ಟ ಎದುರಿಸುವಿರಿ. ನಿಮ್ಮ ದೃಢತೆ ಹೆಚ್ಚಿಸಲೂ ಇದು ನೆರವಾಗಲಿದೆ. ಹಿಂಜರಿಯದೆ ಕಾರ್ಯ ಎಸಗಿ, ಸಫಲತೆ ಖಚಿತ.

ಸಿಂಹ
ಕೌಟುಂಬಿಕ ಸಂಬಂಧ ಸುಧಾರಣೆ,  ಮುನಿಸು ನಿವಾರಣೆ.  ಉದ್ಯೋಗಿಗಳಿಗೆ  ದಿನದ ಆರಂಭದಲ್ಲಿ ಆತಂಕ, ಬಳಿಕ  ನಿರಾಳತೆ.

ಕನ್ಯಾ
ನಿಮ್ಮ ಸಮಸ್ಯೆಗೆ ಇತರರನ್ನು ದೂರಬೇಡಿ. ನಿಮ್ಮಲ್ಲೇ ಸಮಸ್ಯೆಯ ಕಾರಣವಿದೆ. ಅದನ್ನು ಸರಿಪಡಿಸಿ. ಸಾಂಸಾರಿಕ ಭಿನ್ನಮತ ನಿವಾರಣೆ.

ತುಲಾ
ಅಶಾಂತ ಮನಸ್ಥಿತಿ ಕಾಡಬಹುದು. ಅದನ್ನು ಬದಿಗಿಟ್ಟು ನಿಮ್ಮ ವೃತ್ತಿ ಗುರಿ ಸಾಧಿಸುವತ್ತ ಗಮನ ಹರಿಸಿ. ಕೌಟುಂಬಿಕ ಸಹಕಾರ ಕಳಕೊಳ್ಳದಿರಿ.

ವೃಶ್ಚಿಕ
ಪ್ರೀತಿಪಾತ್ರರನ್ನು ಗೌರವದಿಂದ ಕಾಣಿರಿ. ಬಾಂಧವ್ಯ ಉಳಿಯಲು ಸಮಾನಗೌರವ ಅಗತ್ಯ. ಯಾರದೇ ಅವಹೇಳನ ಮಾಡದಿರಿ.

ಧನು
ಹಣಕಾಸು ಸ್ಥಿತಿ ಉತ್ತಮ. ವ್ಯವಹಾರ ಉಜ್ವಲ. ಕಾಡುತ್ತಿದ್ದ ಕೆಲವು ನೋವುಗಳು ಶಮನ. ಕೌಟುಂಬಿಕ ನೆಮ್ಮದಿ. ದುಂದುವೆಚ್ಚ ಆಗಲಿದೆ.

ಮಕರ
ಇಂದು ಮಾನಸಿಕ ಕಿರಿಕಿರಿ ಬಾಽಸಲಿದೆ. ಅದನ್ನು ಎಲ್ಲರ ಮೇಲೆ ಕಾರಬೇಡಿ.  ಕೆಲಸ ಮತ್ತು ಕುಟಂಬದ ಮಧ್ಯೆ ಸಮತೋಲನವಿರಲಿ.

ಕುಂಭ
ಗ್ರಹಗತಿ ಪೂರಕ. ಸಂಬಂಧದಲ್ಲಿ ಒಳಿತಾಗಲಿದೆ. ಮನಸ್ತಾಪ ಅಂತ್ಯ. ಕಠಿಣ ಶ್ರಮಕ್ಕೆ ಸೂಕ್ತ ಪ್ರತಿ-ಲ. ವಿವಾಹ ಸಂಬಂಧ ಕೂಡಿಬಂದೀತು.
ಮೀನ
ಸಣ್ಣ ಜಗಳದಿಂದ ದೂರವಿರಿ. ಅದುವೇ ವಿಕೋಪಕ್ಕೆ ಹೋದೀತು. ಮಾತಿನ ಮೇಲೆ ನಿಯಂತ್ರಣ ಇರಲಿ.  ಒತ್ತಡ ಹೆಚ್ಚಿಸುವ ಕೆಲಸ ತಪ್ಪಿಸಿಕೊಳ್ಳಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!