ದಿನಭವಿಷ್ಯ: ಶನಿವಾರದ ದಿನ ಯಾವ ರಾಶಿಗೆ ಏನು ಫಲ?

ಮೇಷ
ಬಂಧುಗಳಿಂದ ಹಿತ ತರುವ ಸುದ್ದಿ ಕೇಳುವಿರಿ. ವ್ಯವಹಾರದಲ್ಲಿ ಆರ್ಥಿಕ ಲಾಭ. ಕಾಡುತ್ತಿದ್ದ ಸಮಸ್ಯೆಯೊಂದು ಪರಿಹಾರ ಕಾಣುವುದು.  ತೃಪ್ತಿಕರ ದಿನವಿದು.

ವೃಷಭ
ನಿಮ್ಮ ಸುತ್ತ ಮಹತ್ವದ ಬದಲಾವಣೆ ನಡೆದೀತು. ಅದು ನಿಮ್ಮ ಮೇಲೂ ಪರಿಣಾಮ ಬೀರಬಹುದು. ಪರಿಸ್ಥಿತಿ ಎದುರಿಸಲು ಸಜ್ಜಾಗಿರಿ. ಧೃತಿಗೆಡದಿರಿ.

ಮಿಥುನ
ನಿಮ್ಮ ಗುರಿಯಿಂದ ವಿಚಲಿತರಾಗದಿರಿ. ವಿಘ್ನ ಒದಗಿದರೂ ಅದು ಪರಿಹಾರವೂ ಕಾಣುವುದು. ಹಳೆಯ ತಪ್ಪನ್ನೆ ಪುನರಾವರ್ತಿಸದಿರಿ.

ಕಟಕ
ನಿಮ್ಮ ನಿರ್ವಹಣೆ ಇನ್ನಷ್ಟು ಉತ್ತಮಪಡಿಸಬೇಕು. ಇಲ್ಲವಾದರೆ ಬಯಸಿದ ಫಲ ಸಿಗಲಾರದು. ಆಹಾರದಲ್ಲಿ ಹಿತಮಿತ ಸಾಧಿಸುವುದು ಒಳಿತು. ಹೊಟ್ಟೆ ಕೆಡುವ ಸಂಭವ.

ಸಿಂಹ
ಮನದೊಳಗಿನ ತಾಕಲಾಟ ಕಡಿಮೆ ಮಾಡಲು ನಿಮ್ಮ ಇಷ್ಟದ ಹವ್ಯಾಸದಲ್ಲಿ ತೊಡಗಿಕೊಳ್ಳಿ. ಕೌಟುಂಬಿಕ ಪರಿಸ್ಥಿತಿ ಮನಸ್ಸಿನ ಶಾಂತಿ ಕದಡಬಹುದು.

ಕನ್ಯಾ
ನಿಮ್ಮ ಜತೆಗಿನ ವ್ಯಕ್ತಿಗಳ ವರ್ತನೆ ಅಸಹನೀಯ ಎನಿಸಬಹುದು. ಆದರೆ ಅವರ ಜತೆ ಹೊಂದಿ ಬಾಳುವುದು ಮುಖ್ಯ. ಇತರರ ಭಾವನೆಯನ್ನು ಗೌರವಿಸಿ.

ತುಲಾ
ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸ ಬಹುದು. ಕೆಲವು ಭಾವುಕ ವಿಷಯಗಳನ್ನು ವೈಚಾರಿಕತೆಯಿಂದ ಚಿಂತಿಸಿ. ಹಾಗಾಗಿ  ಚಿಂತೆ ಕಡಿಮೆಯಾದೀತು.

ವೃಶ್ಚಿಕ
ನೀವು ತೋರುವ ಪ್ರೀತಿ, ಕಾಳಜಿಗೆ ಅದೇ ಬಗೆಯ ಸ್ಪಂದನೆ ದೊರಕದೆ ಇರಬಹುದು. ಅದರಿಂದ ಎದೆಗುಂದದಿರಿ. ಮನೆಯಲ್ಲಿ ಹೆಚ್ಚಿನ ಜವಾಬ್ದಾರಿ.

ಧನು
ಇಂದು ಎಂದಿಗಿಂತ ಹೆಚ್ಚು ಕಾರ್ಯ ಮಾಡಬೇಕಾಗುವುದು. ಹೊಣೆಗಾರಿಕೆಯೂ ಹೆಚ್ಚು. ಇತರರ ಸಹಕಾರ ನಂಬಿಕೊಂಡು ಕೂರದಿರಿ. ನೀವೇ ನಿರ್ವಹಿಸಿ.

ಮಕರ
ಆರೋಗ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿ. ಇಲ್ಲವಾದರೆ ಕಿರಿಕಿರಿ ಅನುಭವಿಸುವಿರಿ. ವ್ಯವಹಾರದಲ್ಲಿ  ಸಮಸ್ಯೆ ಒದಗಿದರೂ ಬಳಿಕ ಪರಿಹಾರ.

ಕುಂಭ
ಆರ್ಥಿಕ ಒತ್ತಡ ಕಾಡಬಹುದು. ಹಾಗೆಂದು ಗಾಬರಿ ಯಾಗಬೇಕಾದ ಅಗತ್ಯವಿಲ್ಲ. ಸೂಕ್ತ ನೆರವು ಸಕಾಲದಲ್ಲಿ ಒದಗುವುದು.

ಮೀನ
ಪ್ರತಿಕೂಲ ಪರಿಸ್ಥಿತಿ ಉದ್ಭವವಾದೀತು. ಅದರಿಂದ ಧೃತಿಗೆಡದಿರಿ. ನಿಮ್ಮ ಛಲ ಬಿಡದಿದ್ದರೆ ನೀವು ಯಶ ಸಾಧಿಸುವಿರಿ. ಇತರರನ್ನು ಅವಲಂಬಿಸದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!