ಶ್ರೀರಂಗಪಟ್ಟಣದಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್: ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ಹೊಸದಿಗಂತ ಶ್ರೀರಂಗಪಟ್ಟಣ :

ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನಲ್ಲಿ ಬೀದಿ ನಾಯಿಗಳು ಇಬ್ಬರು ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸಿ, ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಗಂಜಾಂನ ಒಲೆಕುಯ್ಯೋ ಬೀದಿಯ ನಿವಾಸಿ ಮಂಜುನಾಥ್ ಎಂಬುವರ 7 ವರ್ಷದ ಭವ್ಯ ಹಾಗೂ ಅದೇ ಬೀದಿಯ ಶಿವು ಎಂಬುವವರ 8 ವರ್ಷದ ಕೀರ್ತನ ಬೀದಿನಾಯಿಗಳ ದಾಳಿಗೊಳಗಾದ ಹೆಣ್ಣು ಮಕ್ಕಳು. ಈ ಇಬ್ಬರು ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ನಾಯಿಗಳ ಹಿಂಡು ದಾಳಿ ನಡೆಸಿ, ಮಕ್ಕಳನ್ನು ಕೆಳಕ್ಕೆ ಕೆಡವಿಕೊಂಡು ಹೊಟ್ಟೆ, ತಲೆ, ಕಣ್ಣು, ಕೆನ್ನೆ ಭಾಗಗಳನ್ನು ಕಚ್ಚಿ ರಕ್ತ ಸೋರುವಂತೆ ಗಾಯಗೊಳಿಸಿವೆ.

ನಾಯಿಗಳ ದಾಳಿಯಿಂದ ಭಯಬೀತರಾದ ಮಕ್ಕಳ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಓಡಿ ಬಂದು ನಾಯಿಗಳಿಗೆ ಬೆದರಿಸಿ, ಓಡಿಸುವ ಕೆಲಸ ಮಾಡಿದ್ಧಾರೆ. ದಾಳಿಯಿಂದ ಗಾಯಗೊಂಡು ರಕ್ತ ಸೋರುತ್ತಿದ್ದ ಮಕ್ಕಳನ್ನು ಮೇಲೆತ್ತಿ, ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!