ಹಾರ್ಮುಜ್ ಜಲಸಂಧಿ ಮುಚ್ಚಲು ನಿರ್ಧಾರ! ಇಸ್ರೇಲ್-ಇರಾನ್ ಯುದ್ಧದ ನಡುವೆ ತೈಲ ಬಿಕ್ಕಟ್ಟು ಭೀತಿಯಲ್ಲಿ ಭಾರತ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಸ್ರೇಲ್ ಮತ್ತು ಇರಾನ್ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿರುವ ಸಮಯದಲ್ಲಿ, ಇರಾನ್ ಸಂಸತ್ತು ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಅಮೆರಿಕವು ಇರಾನ್ ನ ಮೂರು ಪರಮಾಣು ಘಟಕಗಳ ಮೇಲೆ ಮಾಡಿದ ಬಾಂಬ್ ದಾಳಿಗೆ ಪ್ರತಿಸ್ಪಂದನೆಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಜಾಗತಿಕವಾಗಿ ಶೇಕಡಾ 25ರಷ್ಟು ತೈಲ ಸಾಗಣೆ ನಡೆಯುವ ಈ ಜಲಮಾರ್ಗ ಬಂದ್ ಆಗಿದರೆ, ಅದರ ಪರಿಣಾಮ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ತಟ್ಟಲಿದೆ ಎಂಬ ಆತಂಕ ತೀವ್ರವಾಗಿದೆ.

ಹಾರ್ಮುಜ್ ಜಲಸಂಧಿ ಮುಚ್ಚುವ ಪ್ರಸ್ತಾವನೆಗೆ ಇರಾನ್ ಸಂಸತ್ತು ಮತದಾನ ನಡೆಸಿ ಅನುಮೋದನೆ ನೀಡಿದರೆನ್ನಲಾಗುತ್ತಿದೆ. ಆದರೆ ಅಂತಿಮ ನಿರ್ಧಾರವನ್ನು ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ತೆಗೆದುಕೊಳ್ಳಬೇಕಿದೆ. ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಎಸ್ಮಾಯಿಲ್ ಕೊಸಾರಿ “ಅಗತ್ಯವಿದ್ದರೆ ಯಾವುದೇ ಕ್ಷಣದಲ್ಲಿ ಮುಚ್ಚಬಹುದು” ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಈ ಜಲಸಂಧಿ ಪರ್ಷಿಯನ್ ಕೊಲ್ಲಿಯನ್ನು ಹಿಂದೂ ಮಹಾಸಾಗರಕ್ಕೆ ಸಂಪರ್ಕಿಸುತ್ತದೆ. ದಿನಕ್ಕೆ ಸುಮಾರು 2 ಮಿಲಿಯನ್ ಬ್ಯಾರೆಲ್ ತೈಲ ಭಾರತಕ್ಕೆ ಇದೇ ಮಾರ್ಗದಿಂದ ಬರುತ್ತದೆ. ಮಧ್ಯಪ್ರಾಚ್ಯದ ಇರಾಕ್, ಸೌದಿ, ಯುಎಇ, ಕುವೈತ್‌ನಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಜಲಸಂಧಿ ಬಂದಾದರೆ ಬೆಲೆ ಏರಿಕೆಗೆ ಕಾರಣವಾಗಬಹುದು ಎಂಬ ಆತಂಕ ಇದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!