ಮದ್ಯ ಹಗರಣದ ಕಿಂಗ್ ಪಿನ್ ದೆಹಲಿ ಸಿಎಂ ಕೇಜ್ರಿವಾಲ್: ಮನೋಜ್ ತಿವಾರಿ ಸ್ಪೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಸಂಸದ ಮನೋಜ್ ತಿವಾರಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ದೆಹಲಿ ಮದ್ಯ ನೀತಿ ಹಗರಣದಲ್ಲಿ ಎಎಪಿ ನಾಯಕರೇ ಕಿಂಗ್‌ಪಿನ್ ಎಂದು ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶಾನ್ಯ ದೆಹಲಿಯ ಬಿಜೆಪಿ ಸಂಸದರು, ಕೊಳಚೆ ಪ್ರದೇಶಕ್ಕೆ ಖರ್ಚು ಮಾಡಬೇಕಾಗಿದ್ದ ಹಣವನ್ನು ಆಮ್ ಆದ್ಮಿ ಪಕ್ಷವು ಮದ್ಯದ ಹಗರಣಕ್ಕೆ ಖರ್ಚು ಮಾಡಿದೆ ಎಂದು ಹೇಳಿದರು. ಎಎಪಿ ಪಕ್ಷವು ಸಾರ್ವಜನಿಕ ಕಲ್ಯಾಣ ಹಣವನ್ನು ಲೂಟಿ ಮಾಡಿದೆ ಮತ್ತು ಅವರ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಬೇಕೆಂದು ಹೇಳಿದರು.

ಮದ್ಯದ ಹಗರಣದಲ್ಲಿ ಕೇಜ್ರಿವಾಲ್ ಕಿಂಗ್ ಪಿನ್ ಆಗಿದ್ದು, ಚಾರ್ಜ್ ಶೀಟ್ ಪ್ರಕಾರ ಅವರು 37 ನೇ ಆರೋಪಿಯಾಗಿದ್ದಾರೆ ಎಂದು ತಿವಾರಿ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!