ಹೊಸದಿಗಂತ ವರದಿ, ವಿಜಯಪುರ:
8 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರದ ಉಪವಿಭಾಗಾಧಿಕಾರಿ ಕಚೇರಿ ಪ್ರಥಮ ದರ್ಜೆ ಸಹಾಯಕ ಹಾಗೂ ಸಿಪಾಯಿಯೊಬ್ಬನನ್ನು ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಇಲ್ಲಿನ ಪ್ರಥಮ ದರ್ಜೆ ಸಹಾಯಕ ರಮೇಶ ಹೊನ್ನಹಳ್ಳಿ ಹಾಗೂ ಸಿಪಾಯಿ ಪ್ರಮೋದ ಕನಸೆ ಬಲೆಗೆ ಬಿದ್ದವರು.
ಎನ್ಎ ಲ್ಯಾಂಡ್ಗೆ ಎನ್ಒಸಿ ನೀಡುವ ಸಂಬಂಧ 8 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ತಾಳಿಕೋಟೆಯ ಪೀರಮಹ್ಮದ ಅಬ್ದುಲ್ ಅಜೀಜ್ ಅವರು ದೂರು ನೀಡಿದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂದಿಸಿದ್ದಾರೆ.
ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣವರ ನೇತೃತ್ವದಲ್ಲಿ ದಾಳಿ ನಡೆದಿದೆ.