ಹೊಸದಿಗಂತ ವರದಿ ಕಲಬುರಗಿ:
ಮಂಡ್ಯ ಜಿಲ್ಲಾ ಚುನಾವಣೆ ರಾಯಭಾರಿ ಆಗಿರುವುದರಿಂದ ನಾನು ಯಾವುದೇ ಪಕ್ಷದ ಪರ ಹಾಗೂ ಯಾವುದೇ ವ್ಯಕ್ತಿ ಪರ ಪ್ರಚಾರ ಮಾಡುವುದಿಲ್ಲ ಎಂದು ಖ್ಯಾತ ನಟ ನಿನಾಸಂ ಸತೀಶ್ ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಕೆಲ ನಟ-ನಾಯಕರು ರಾಜಕೀಯ ಪಕ್ಷದ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರಿಗೆ ಬೇಕಾದರೂ ಓಟ್ ಹಾಕಿ ಅನ್ನಬಹುದು, ಅದು ಅವರವರ ವೈಯಕ್ತಿಕ ನಿರ್ಧಾರವಾಗಿದ್ದು, ಅದರ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ಇಲ್ಲ ಎಂದರು.
ಮತದಾರರು ಒಳ್ಳೆಯ ವ್ಯಕ್ತಿಯಾಗಿರಬೇಕು, ಜನರ ಕೈಗೆ ಸಿಗುವ ವ್ಯಕ್ತಿಗೆ ಮತ ನೀಡಬೇಕು.ನಿಮ್ಮನ್ನೆ ದಬಾಯಿಸುವ, ನಿಮ್ಮ ಹಕ್ಕನ್ನು ಕಿತ್ತುಕೊಳ್ಳುವ ವ್ಯಕ್ತಿಗೆ ಮತ ಹಾಕಬೇಡಿ ಎಂದು ಮತದಾರರಿಗೆ ನಟ ಸತೀಶ್ ಸಲಹೆ ನೀಡಿದರು.