ಜಾತ್ರಾ ರಥೋತ್ಸವ ವೇಳೆ ರಥದ ಚಕ್ರಕ್ಕೆ‌ ಸಿಲುಕಿ ಯುವಕ ದಾರುಣ ಸಾವು

ಹೊಸದಿಗಂತ ವಿಜಯಪುರ:

ಜಾತ್ರಾ ರಥೋತ್ಸವ ವೇಳೆ ರಥದ ಚಕ್ರಕ್ಕೆ‌ ಸಿಲುಕಿ ಯುವಕ ಸಾವಿಗೀಡಾದ ಘಟನೆ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಬಿ.ಬಿ. ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ದೇವೇಂದ್ರ ಬಡಿಗೇರ (24) ಮೃತಪಟ್ಟ ಯುವಕ.

ಘನ ಗುರುಸಿದ್ಧೇಶ್ವರ ದೇವರ ಜಾತ್ರೆಯಲ್ಲಿ, ರಥವನ್ನು ಎಳೆಯುವ ವೇಳೆ ಆಯತಪ್ಪಿ ಯುವಕ ಚಕ್ರದ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಯುವಕ ಅಸುನೀಗಿದ್ದಾನೆ.

ಈ ದುರಂತದ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!