ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತಮಿಳುನಾಡಿನಾದ್ಯಂತ 34 ಪ್ರದೇಶಗಳಲ್ಲಿ ಶೋಧ ನಡೆಸಿದೆ.
ತಮಿಳುನಾಡು ರಾಜ್ಯದ ಆರು ಜಿಲ್ಲೆಗಳ 8 ಮರಳು ರೀಚ್ಗಳಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ಎಸ್. ರಾಮಚಂದ್ರನ್, ಕೆ. ರತ್ನಂ, ಕರಿಕಾಳನ್ ಮತ್ತು ಅವರ ಸಹಚರರು ಸೇರಿದಂತೆ ಹಲವರ ನಿವಾಸಗಳು ಮತ್ತು ವ್ಯಾಪಾರ ಸ್ಥಳಗಳು ಸೇರಿದಂತೆ 34 ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ.
ಇಡಿ ದಾಳಿಗಳಲ್ಲಿ 2.33 ಕೋಟಿ ರೂ. ಲೆಕ್ಕಕ್ಕೆ ಸಿಗದ ನಗದು ಸೇರಿದಂತೆ ವಿವಿಧ ದೋಷಾರೋಪಣಾ ದಾಖಲೆಗಳು ಪತ್ತೆಯಾಗಿವೆ. ಇಡಿ ಅಧಿಕಾರಿಗಳು ರೂ.12.82 ಕೋಟಿ ಹಣವನ್ನು ಸ್ಥಗಿತಗೊಳಿಸಿದ್ದು, 56.86 ಲಕ್ಷ ಹಣ ಹಾಗೂ 1,024 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಟ್ವಿಟ್ಟರ್ನಲ್ಲಿ ತಿಳಿಸಿದೆ.