ಹೊಸದಿಗಂತ ವರದಿ, ಭಟ್ಕಳ :
ಇಲ್ಲಿನ ಇಂಜಿನೀಯರಿಂಗ್ ಕಾಲೇಜಿನ ಸಿಬ್ಬಂದಿಯೋರ್ವರು ಬುಧವಾರ ಕಾಲೇಜಿನ ಲ್ಯಾಬ್ ಕಚೇರಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಯ್ಕಿಣಿಯ ತೆರ್ನಮಕ್ಕಿ ನಿವಾಸಿ ಶ್ರೀಧರ ಮಾದೇವ ಮೊಗೇರ (೫೩)ಮೃತ ವ್ಯಕ್ತಿ. ಇವರು ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಲ್ಯಾಬ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಬುಧವಾರ ಬೆಳಿಗ್ಗೆ ಮೆಕಾನಿಕ್ ಲ್ಯಾಬ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಮೃತರ ಪತ್ನಿ ಮಮತಾ ಶ್ರೀಧರ ಮೊಗೇರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.