June 22, 2026
Monday, June 22, 2026
spot_img

ಮೃತ್ಯು ಕೂಪವಾಯ್ತು ಕೃಷಿ ಹೊಂಡ: ಈಜಲು ತೆರಳಿದ್ದ ನಾಲ್ವರು ಮಕ್ಕಳ ದಾರುಣ ಅಂತ್ಯ

ಹೊಸದಿಗಂತ ವರದಿ ​ಯಾದಗಿರಿ:

ಕೃಷಿ ಹೊಂಡದಲ್ಲಿ ಈಜುಲು ಹೋದ ನಾಲ್ವರು ಮಕ್ಕಳು ದಾರುಣ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕಿರಣ (6), ಬಸಮ್ಮ (11), ಶರತ್ (6), ಹನುಮೇಶ್ (7) ಸಾವನ್ನಪ್ಪಿದ್ದ ನತದೃಷ್ಟ ಮಕ್ಕಳು.

ಶಾಲೆಗೆ ರಜೆ ಇದ್ದ ಕಾರಣಕ್ಕೆ ಮಕ್ಕಳು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದರು. ಹೊಂಡದಲ್ಲಿ‌‌ ನೀರು ಹೆಚ್ಚಿದ್ದ ಕಾರಣ ಹೊರಗೆ ಬರಲಾರದೆ ಮುಳುಗಿದ್ದಾರೆ. ಮಕ್ಕಳನ್ನು‌ ಕಳೆದುಕೊಂಡ‌ ಪಾಲಕರ‌ ಆಕ್ರಂದನ ಮುಗಿಲು‌ ಮುಟ್ಟಿದೆ.

ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !