ಶಂಭು ಗಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಹಿಂದೆಯೂ ಇದೇ ರೀತಿ ವಿಷ ಸೇವಿಸಿ ರೈತರೊಬ್ಬರು ಸಾವನ್ನಪ್ಪಿದ್ದರು. ಶಂಭು ಗಡಿಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ರೈತರ ಸಂಖ್ಯೆ ಎರಡಕ್ಕೇರಿದೆ. ಮೃತ ರೈತನ ಹೆಸರು ರೇಶಮ್ ಸಿಂಗ್.

ರೇಶಮ್ ಶಂಭು ಮೋರ್ಚಾದಲ್ಲಿ ವಿಷ ಕುಡಿದಿದ್ದರು. ಇದಾದ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ರಾಜಪುರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿಯೇ ಸಾವನ್ನಪ್ಪಿದರು. ರೇಶಮ್ ಸಿಂಗ್ ಜಗತಾರ್ ಸಿಂಗ್ ಅವರ ಮಗ. ಅವರು ಟಾರ್ಟರಾನ್ ಜಿಲ್ಲೆಯ ಪಹು ವಿಂಡ್ ನಿವಾಸಿಯಾಗಿದ್ದರು.

ರೈತ ಮುಖಂಡ ತೇಜ್ಬೀರ್ ಸಿಂಗ್ ಮಾತನಾಡಿ, ಶಂಭು ಮತ್ತು ಖಾನೌರಿ ಗಡಿಯಲ್ಲಿ 11 ತಿಂಗಳಿನಿಂದ ಆಂದೋಲನ ನಡೆದರೂ ಪರಿಹಾರ ಕಂಡುಕೊಳ್ಳದ ಸರ್ಕಾರದ ವಿರುದ್ಧ ರೇಶಮ್ ಸಿಂಗ್ ಕೋಪಗೊಂಡಿದ್ದರುಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!