VIRAL | ಕೃಷಿಯಲ್ಲಿ ಲಾಭ ಬಂದಿದೆ ಎಂದು ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದ ರೈತ ಕುಟುಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಲ್ಲೊಂದು ರೈತ ಕುಟುಂಬ ಮದುವೆಯ ಬಳಿಕ ತಮ್ಮ ಸೊಸೆಯನ್ನು ಹೆಲಿಕಾಪ್ಟರ್​ನಲ್ಲೇ ಮನೆಗೆ ಕರೆತರುವ ಮೂಲಕ ಸುದ್ದಿ ಮಾಡಿದೆ. ಸೊಸೆ ಹಾಗೂ ಮಗ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಫೋಟೊ, ವಿಡಿಯೋಗಳು ವೈರಲ್‌ ಆಗಿವೆ.

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ದೇದರ್ ಗ್ರಾಮದಲ್ಲಿ ಮೊದಲ ಬಾರಿಗೆ ಸೋಮವಾರ ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ. ರೈತ ದೀಪ್ ಚಂದ್ರ ಯಾದವ್ ಅವರು ತಮ್ಮ ಸೊಸೆಯನ್ನು ಹೆಲಿಕಾಪ್ಟರ್​ನಲ್ಲಿ ಮನೆಗೆ ಕರೆತಂದಿದ್ದಾರೆ.

ದೀಪ್ ಚಂದ್ರ ಯಾದವ್ ಅವರ ತಂದೆಗೆ ತಮ್ಮ ಸೊಸೆಯಂದಿರನ್ನು ಹೆಲಿಕಾಪ್ಟರ್​ನಲ್ಲಿ ಕರೆತರುವ ಕನಸಿತ್ತಂತೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ತಂದೆಯ ಕನಸನ್ನು ದೀಪ್ ಚಂದ್ರ ಯಾದವ್ ಪೂರ್ಣಗೊಳಿಸಿದ್ದಾರೆ.

ದೀಪ್ ಚಂದ್ರ ಯಾದವ್ ಅವರ ಪುತ್ರ ಅಭಿಷೇಕ್ ಮತ್ತು ಪಾರ್ಸಾ ಗ್ರಾಮದ ಜ್ಯೋತಿ ಅವರ ವಿವಾಹ ಖಜುರಾಹೋದ ಹೋಟೆಲ್‌ನಲ್ಲಿ ಸೋಮವಾರ ಅದ್ಧೂರಿಯಾಗಿ ನೆರವೇರಿತು. ಆ ಬಳಿಕ ನವ ವಧು-ವರರನ್ನು ಹೆಲಿಕಾಪ್ಟರ್​ನಲ್ಲಿ ದೇದರ್ ಗ್ರಾಮಕ್ಕೆ ಕರೆತರಲಾಯಿತು.

ದೀಪ್ ಚಂದ್ರ ಯಾದವ್ ಅವರದ್ದು ಮಾದರಿ ಕೃಷಿ ಕುಟುಂಬ. ಪ್ರತೀ ಬಾರಿ ಹೆಲಿಕಾಪ್ಟರ್​ ಬಗ್ಗೆ ಯೋಚಿಸಿದಾಗ ಏನಾದರೂ ಸಮಸ್ಯೆ ಉಂಟಾಗಿ, ರದ್ದಾಗುತ್ತಿತ್ತು. ಆದರೆ ಈ ಬಾರಿ ಕೃಷಿಯಲ್ಲಿ ಉತ್ತಮ ಫಸಲು ಬಂದು 50 ಲಕ್ಷ ರೂ ಆದಾಯ ಗಳಿಸಿದ್ದರು. ಇದರಿಂದಾಗಿ ಮನೆಯರೆಲ್ಲ ಸೇರಿ ನಿರ್ಧರಿಸಿ, ಇದೇ ಹಣದಲ್ಲಿ ಹೆಲಿಕಾಪ್ಟರ್​ ಬುಕ್ ಮಾಡಿ ಸೊಸೆಯನ್ನು ಅದ್ಧೂರಿಯಾಗಿ ಊರಿಗೆ ಕರೆಸಿಕೊಂಡಿದ್ದಾರೆ.

ತಮ್ಮೂರಿಗೆ ಮೊದಲ ಬಾರಿಗೆ ಹೆಲಿಕಾಪ್ಟರ್‌ ಆಗಮಿಸಿದ ಕಾರಣ ಗ್ರಾಮಸ್ಥರು ಕುಣಿದು ಕುಪ್ಪಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!